BlogCulturalEducationElectionEntertainmentFashionHighlightsHuman storiesLifestyleLocal newsOthersState newsSuccess storiesTop StoriesTrendingWomen Care

ಸಿದ್ಧಾಪುರ: ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಗೆ ಸರಸ್ವತಿ ವಿದ್ಯಾಲಯದ ಆರು ವಿದ್ಯಾರ್ಥಿಗಳು ಆಯ್ಕೆ

Aware others:

ಹತ್ತನೇ ತರಗತಿಯ ಯುಕ್ತಾ
ಒಂಭತ್ತನೇ ತರಗತಿಯ ಅನನ್ಯ
ಒಂಭತ್ತನೇ ತರಗತಿಯ ಕ್ಷಮಿತಾ

ಸಿದ್ಧಾಪುರ: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಉಡುಪಿ ಹಾಗೂ ವಿಜಯ ಕರ್ನಾಟಕ ಸಹಯೋಗದಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ನಡೆಸಲಾಗಿದ್ದ ವಿಜಯ ಕರ್ನಾಟಕ ಚಿತ್ರಕಲಾ ಸ್ಪರ್ಧೆಯಲ್ಲಿ ಸಿದ್ಧಾಪುರದ ಸರಸ್ವತಿ ವಿದ್ಯಾಲಯದ ಆರು ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಎಂಟನೇ ತರಗತಿಯ ನಶ್ವಾನ್

6 ನೇ ತರಗತಿಯಿಂದ 10ನೇ ತರಗತಿಯ ವಿದ್ಯಾರ್ಥಿಗಳು ಜೂನ್ 27ರಂದು ನಡೆದ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, 15 ಅತ್ಯುತ್ತಮ ಚಿತ್ರಗಳು ಆಯ್ಕೆಯಾಗಿದ್ದವು. ಆ ಪೈಕಿ ಸರಸ್ವತಿ ವಿದ್ಯಾಲಯದ ಹತ್ತನೇ ತರಗತಿಯ ಯುಕ್ತಾ, ಒಂಭತ್ತನೇ ತರಗತಿಯ ಅನನ್ಯ ಹಾಗೂ ಕ್ಷಮಿತಾ, ಎಂಟನೇ ತರಗತಿಯ ನಶ್ವಾನ್, ಏಳನೇ ತರಗತಿಯ ಕೈಲಾಶ್, ಆರನೇ ತರಗತಿಯ ಅವನಿ. ವಿ. ಪೈ ಜಿಲ್ಲಾ ಮಟ್ಟದ ಸ್ಪರ್ಧೆಗೆ  ಆಯ್ಕೆಯಾಗಿದ್ದಾರೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.

ಏಳನೇ ತರಗತಿಯ ಕೈಲಾಶ್
ಆರನೇ ತರಗತಿಯ ಅವನಿ. ವಿ. ಪೈ

ಜುಲೈ 7ರಂದು ಉಡುಪಿಯ ಶ್ಯಾಮಿಲಿ ಸಭಾಂಗಣದಲ್ಲಿ ಜಿಲ್ಲಾ‌ಮಟ್ಟದ ಸ್ಪರ್ಧೆ ನಡೆಯಲಿದ್ದು, ಶಾಲಾ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಶಿಕ್ಷಕರ ವೃಂದ ಶುಭ ಕೋರಿದೆ.


Aware others:

Leave a Reply

Your email address will not be published. Required fields are marked *

error: Content is protected !!