ಸಿದ್ಧಾಪುರ: ಕಾಡಾನೆ ಬಂಧನಕ್ಕೆ ಸಕ್ರಬೈಲ್, ಮೈಸೂರಿನಿಂದ ಆರು ಆನೆಗಳ ಆಗಮನ – ಹಿಡಿದೇ ತೀರುತ್ತೇವೆ ಎಂದ ಅರಣ್ಯಾಧಿಕಾರಿಗಳು
ಕುಂದಾಪುರ : ರೆಡಿಯೋ ಕಾಲರ್ ಅಳವಡಿಸಲಾಗಿದ್ದ ಕಾಡಾನೆಯೊಂದು ಜಿಲ್ಲೆಯ ಸಿದ್ಧಾಫುರ ಹೊಸಂಗಡಿ ಭಾಗದಲ್ಲಿ ಆತಂಕ ತಂದಿಟ್ಟರೆ, ಅರಣ್ಯಾಧಿಕಾರಿಗಳು ಇಂದು ರಾತ್ರಿಯೊಳಗೆ ತಪ್ಪಿಸಿಕೊಂಡಿರುವ ಾನೆಯನ್ನು ಹಿಡಿದೇ ತೀರುತ್ತೇವೆ ಎಂದು ಪಣ ತೊಟ್ಟಿದ್ದಾರೆ. ಅದಕ್ಕಾಗಿ ಸಕ್ರೆ ಬೈಲ್ ಆನೆ ಶಿಬಿರದಿಂದ ಬಾಲಚಂದ್ರ, ಸೋಮಣ್ಣ ಹಾಗೂ ಬಹಾದ್ದೂರ್ ಎನ್ನುವ ಮೂರು ಆನೆಗಳನ್ನು ಈಗಾಗಲೇ ಸಿದ್ಧಾಪುರಕ್ಕೆ ಕರೆತರಲಾಗಿದೆ. ಇನ್ನು ಮೈಸೂರಿನಿಮದ ಏಕಲವ್ಯ, ಭೀಮ ಹಾಗೂ ಮಹೇಂದ್ರ ಎಂಬ ಮೂರು ಆನೆಗಳು ದಾರಿಮಧ್ಯೆ ಇದ್ದು ಸಂಜೆಯೊಳಗೆ ಸಿದ್ಧಾಪುರ ತಲುಪಲಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.



ನಾಲ್ಕು ದಿನಗಳ ಹಿಂದೆ ಭದ್ರಾ ರಿಸರ್ವ್ ಫಾರೆಸ್ಟ್ ನಿಂದ ತಪ್ಪಿಸಿಕೊಂಡಿದ್ದ ಕುತ್ತಿಗೆಗೆ ರೇಡಿಯೋ ಕಾಲರ್ ಐಡಿ ಕಟ್ಟಲ್ಪಟ್ಟ ಕಾಡಾನೆ ಎರಡು ಜಿಲ್ಲೆಗಳನ್ನು ದಾಟಿ ಸದ್ಯ ಮಂಗಳವಾರ ಬಾಳೆಬರೆ ಘಾಟಿ ಮೂಲಕ ಹೊಸಂಗಡಿ ಮೂಲಕವಾಗಿ ಬಂದಿದ್ದು, ಬುದವಾರ ಸಿದ್ಧಾಪುರ ಪ್ರವೆಶಿಸಿತ್ತು. ಇದರಿಂದ ಸ್ಥಳೀಯರು ಮತ್ತು ರಸ್ತೆಗಳಲ್ಲಿ ಸಂಚರಿಸುವವರಿಗೆ ಆತಂಕ ಸೃಷ್ಟಿಯಾಗಿತ್ತು. ಈ ಹಿನ್ನೆಲೆಯಲ್ಲಿ ಬುಧವಾರ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಆನೆಯ ಕುತ್ತಿಗೆಯಲ್ಲಿರುವ ರೇಡಿಯೋ ಕಾಲರ್ ಮತ್ತು ಡ್ರೋನ್ ಮೂಲಕ ಆನೆ ಇರುವ ನಿಖರವಾದ ಸ್ಥಳವನ್ನು ಗುರುತಿಸಲು ಸಾಧ್ಯವಾಗುತ್ತಿದ್ದು, ಆನೆ ಈಗ ಹೆನ್ನಾ ಬೈಲ್ ಪ್ರದೆಶದಲ್ಲಿದೆ ಎಂದು ಹೇಳಿಲಾಗಿದೆ.



ಈಗಾಗಲೇ ಅರಣ್ಯ ಇಲಾಖೆಯ ಕಚೇರಿಗೆ ಕುಂದಾಪುರ ಉಪವಿಭಾಗಾಧಿಕಾರಿಗಳಾದ ರಶ್ಮಿ ಎಸ್. ಆರ್., ಕುಂದಾಪುರ ತಹಸೀಲ್ದಾರ್ ಪ್ರದೀಪ್, ಅರಣ್ಯಾಧಿಕಾರಿಗಳು ಆಗಮಿಸಿ ಗಂಭೀರ ಮಾತುಕತೆ ನಡೆಸಿದ್ದಾರೆ. ಗುರುವಾರ ರಾತ್ರಿಯೊಳಗೆ ಆನೆಯನ್ನು ಹಿಡಿಯುವ ಯೋಜನೆ ರೂಪುಗೊಂಡಿದ್ದು, ಮೈಸೂರಿನಿಂದ ಬರುವ ಆನೆಗಳು ಭೆರಟ ಮಾಡಲಿವೆ. ಸಕ್ರೆ ಬೈಲಿನ ಾನೆಗಳು ಬೆಂಬಲಕ್ಕೆ ನಿಲ್ಲಲಿವೆ ಎಂದು ತಿಳಿದು ಬಂದಿದೆ.


