BlogEconomyEducationHighlightsLifestyleLocal newsOthersTrending

ಶಾಲಾ ವಿದ್ಯಾರ್ಥಿಗಳಿಗೆ ಖಾಸಗೀ ಬಸ್ ಪಾಸ್ ವಿತರಣೆ ಆರಂಭ

Aware others:

ಕುಂದಾಪುರ: ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಉಡುಪಿ ಜಿಲ್ಲೆಯಲ್ಲಿ ಸಂಚರಿಸುವ ಖಾಸಗಿ ಎಕ್ಸಪ್ರೆಸ್ ಹಾಗೂ ಸರ್ವಿಸ್ ‌ಬಸ್ಸುಗಳಲ್ಲಿ ಪ್ರಯಾಣಿಸುವ ವಿಧ್ಯಾರ್ಥಿಗಳಿಗೆ ಕೆನರಾ ಬಸ್ಸು ಮಾಲಕರ ಸಂಘದಿಂದ ನೀಡುವ 2025-26ನೇ ಸಾಲಿನ 50%ರಿಯಾಯಿತಿ ವಿಧ್ಯಾರ್ಥಿ ಪಾಸುಗಳ ಅರ್ಜಿ ವಿತರಣೆ ಪ್ರಾರಂಭಗೊಂಡಿದೆ ಎಂದು ಕೆನರಾ ಬಸ್ಸು‌ ಮಾಲಕರ ಸಂಘ (ರಿ) ಇದರ ಪ್ರಕಟಣೆ ತಿಳಿಸಿದೆ.

ಸಂಘದ ಕಛೇರಿಗಳಾದ ಮಂಗಳೂರು, ಪಡುಬಿದ್ರೆ, ಉಡುಪಿ, ಕುಂದಾಪುರ, ಕಾರ್ಕಳ, ಮೂಡಬಿದ್ರೆ,ಕಿನ್ನಿಗೋಳಿ, ಹಿರಿಯಡಕ, ಹೆಬ್ರಿ, ಸಿದ್ಧಾಪುರ,ಬೈಂದೂರು,ಹಾಲಾಡಿ, ಕೇಂದ್ರದಲ್ಲಿ ಅರ್ಜಿಯನ್ನು ಪಡೆದು ಸೂಕ್ತ ದಾಖಲೆಗಳನ್ನು ನೀಡಿ  ವಿಧ್ಯಾರ್ಥಿ ಪಾಸುಗಳನ್ನು ಪಡೆದುಕೊಳ್ಳಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಳಿಗಾಗಿ ಕೆನರಾ ಬಸ್ಸು ಮಾಲಕರ ಸಂಘ, ಇಂಟರ್ ಸಿಟಿ ಕಟ್ಟಡ, ಹೊಟೇಲ್ ಹರಿಕಿರಣ ಹತ್ತಿರ, ಸಿಟಿ ಬಸ್ ನಿಲ್ದಾಣ ಸ್ಟೇಟ್ ಬ್ಯಾಂಕ್ ಮಂಗಳೂರು ಅಥವಾ  7259018002 ಹಾಗೂ 0820-2521211 ಸಂಖ್ಯೆಯನ್ನು ಸಂಪರ್ಕಿಸಬಹುದು.


Aware others:

Leave a Reply

Your email address will not be published. Required fields are marked *

error: Content is protected !!