ಉಳ್ಳೂರು: ಕಂದಾವರದ ಶ್ರೀ ಸಿರವಂತೆ ದೇವಸ್ಥಾನಕ್ಕೆ ಧನ ಸಹಾಯ
ಕುಂದಾಪುರ: ಉಳ್ಳೂರು ಕಂದಾವರದ ಜನತಾ ಕಾಲೋನಿಯ ಶಿರಾವಂತೆ ಅಮ್ಮನವರು, ಹೈಗುಳಿ ಮತ್ತು ಸಪರಿವಾರ ದೈವಗಳ ದೈವಸ್ಥಾನ ದ ಜೀರ್ಣೋದ್ಧಾರಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ದಿಂದ ಪ್ರಸಾದದ ರೂಪದಲ್ಲಿ ಐವತ್ತು ಸಾವಿರ ರೂಪಾಯಿ ಮೊತ್ತದ ಚೆಕ್ ನೀಡಲಾಯಿತು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಯೋಜನಾಧಿಕಾರಿ ಉಮೇಶ್ ಶೆಟ್ಟಿ, ಒಕ್ಕೂಟದ ಅಧ್ಯಕ್ಷ ರಾಜೇಶ್ ಶೆಟ್ಟಿ, ಕಂದಾವರ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಬಾಬಿ, ಗ್ರಾಮ ಪಂಚಾಯತ್ ಸದಸ್ಯ ರಾಮಚಂದ್ರ ಶೇರೆಗಾರ್ ಇವರ ಮೂಲಕ ಶಿರವಂತೆ ದೈವಸ್ಥಾನದ ಸಮಿತಿಯ ಸದಸ್ಯರಾದ ಶಶಿಧರ ಇವರಿಗೆ ಹಸ್ತಾಂತರಿಸಿದರು.
ಈ ಸಂದರ್ಭ ವಲಯದ ಮೇಲ್ವಿಚಾರಕಿ ಶಕುಂತಲಾ, ಒಕ್ಕೂಟದ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.