AccidentBlogCrime newsGovernmentHighlightsHuman storiesLifestyleLocal newsNational NewsObituaryOthersState newsTop StoriesTrending

ಆಂಬ್ಯುಲೆನ್ಸ್ ಡಿಕ್ಕಿ- ಚಿಕಿತ್ಸೆ ಫಲಿಸದೆ ಟೋಲ್ ಸಿಬ್ಬಂದಿ ಸಾವು

Aware others:

ಕುಂದಾಪುರ: ಅಂಬ್ಯುಲೆನ್ಸ್ ಡಿಕ್ಕಿಯಾದ ಪರಿಣಾಮ ಕರ್ತವ್ಯನಿರತ ಟೋಲ್ ಸಿಬ್ಬಂದಿಯೊಬ್ಬ ಗಂಭಿರ ಗಾಯಗೊಂಡು ಸಾವನ್ನಪ್ಪಿದ ಘಟನೆ  ಬೈಂದೂರು ತಾಲೂಕಿನ ಶಿರೂರು ಟೋಲ್‌ನಲ್ಲಿ ಶನಿವಾರ ರಾತ್ರಿ ನಡೆದಿದೆ. ಶಿರೂರು ಟೋಲ್ ಗೇಟ್ ನಲ್ಲಿ ಕೆಲಸ ಮಾಡುತ್ತಿದ್ದ ಟೋಲ್ ಸಿಬ್ಬಂದಿ ಸಂದೀಪ್ ಬಾಲಸೊ ಸೂರ್ಯವಂಶಿ (25) ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ ದುರ್ದೈವಿ.

ಅಪಘಾತ ನಡೆಸಿದ ಅಂಬ್ಯಲೆನ್ಸ್ ಬೈಂದೂರು ಕಡೆಯಿಂದ ಭಟ್ಕಳ ಕಡೆಗೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಪ್ರಯಾಣಿಸುತ್ತಿತ್ತು. ಸಂದೀಪ್ ಬಾಲಸೊ ಸೂರ್ಯವಂಶಿ ಅದೇ ಲೇನ್ ನಲ್ಲಿ ಕರ್ತವ್ಯ ನಿರತನಾಗಿದ್ದು, ಅಂಬ್ಯುಲೆನ್ಸ್ ಡಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡಿದ್ದ ಸಂದೀಪ್‌ ಅವರನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿ ಚಿಕಿತ್ಸೆ ಫಲಿಸದೆ ಸಂದೀಪ್ ಮೃತಪಟ್ಟಿದ್ದಾರೆ. ಬೈಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Aware others:

Leave a Reply

Your email address will not be published. Required fields are marked *

error: Content is protected !!