BlogCrime newsEconomyEntertainmentFashionHighlightsHuman storiesLifestyleLocal newsOthersPoliticsProtestState newsSuccess storiesTop StoriesTrending

ಪೆಹಲ್ಗಾನ್ ದಾಳಿ ಹಿನ್ನೆಲೆ : ಕರಾವಳಿ ತೀರ ಸೇರಿದಂತೆ ರಾಜ್ಯದ ಹಲವೆಡೆ ಸರ್ಕಾರ ಅಲರ್ಟ್

Aware others:

ಕುಂದಾಪುರ: ಜಮ್ಮು ಕಾಶ್ಮೀರದ ಪಹಲ್ಗಾಮ್ ನ ಬಯಸರನ್ ಹುಲ್ಲುಗಾವಲಿನಲ್ಲಿ ನಡೆದ ಭಯೋತ್ಪಾದಕರ ಭೀಕರ ದಾಳಿ ಹಿನ್ನೆಲೆಯಲ್ಲಿ ರಾಜ್ಯದ ಕರಾವಳಿ ತೀರ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಅಲ್ಲದೇ ರಾಜ್ಯ ಪ್ರವಾಸಿ ತಾಣಗಳಿಗೆ ಹೈ ಅಲರ್ಟ್ ಘೋಷಿಸಲಾಗಿದೆ.

ಬಂದರು ಪ್ರದೇಶ, ಮಲ್ಪೆ ಬೀಚ್, ಕುಂದಾಪುರ, ದ.ಕನ್ನಡದ ಪ್ರವಾಸಿ ತಾಣಗಳು ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲು ಸೂಚನೆ ನೀಡಲಾಗಿದೆ. ಅಷ್ಟೇ ಅಲ್ಲದೇ ಸಂಶಯಾಸ್ಪದ ವ್ಯಕ್ತಿಗಳು ಕಂಡು ಬಂದರೆ ವಿಚಾರಣೆ ಮಾಡಲು ಕೂಡ ಸೂಚನೆ ನೀಡಲಾಗಿದೆ.

ಶಿವಮೊಗ್ಗ, ಮಂಗಳೂರು, ಭಟ್ಕಳ, ಹುಬ್ಬಳ್ಳಿಯ ಪ್ರವಾಸಿ ತಾಣಗಳ ಬಳಿ ರೌಂಡ್ಸ್ ಹೆಚ್ಚಿಸಲು ಪೊಲೀಸರಿಗೆ ಸೂಚನೆ ಕೊಡಲಾಗಿದೆ. ಪ್ರವಾಸಿ ತಾಣಗಳ ಬಳಿ ಸಂಶಯಾಸ್ಪದ ವ್ಯಕ್ತಿಗಳು ಕಂಡು ಬಂದರೆ ಕೂಡಲೇ ವಿಚಾರಣೆ ಮಾಡಬೇಕು ಅಂತ ತಿಳಿಸಲಾಗಿದೆ.

ರಾಜ್ಯ ಕರಾವಳಿ ತೀರದ 324 ಕಿ.ಮೀ. ಉದ್ದಕ್ಕೂ ಪ್ರತೀ ಒಂದು ಕಿ.ಮೀ.ಗೆ ತಲಾ 2 ಮಂದಿಯಂತೆ ಸಿಬಂದಿಯನ್ನು ನಿಯೋಜನೆಗೊಳಿಸಿದೆ. ಸಮುದ್ರದಲ್ಲಿ 13 ಬೋಟ್‌ಗಳು ಗಸ್ತು ನಿರತವಾಗಿದ್ದು, ಅಗತ್ಯವಿದ್ದಲ್ಲಿ ಹೆಚ್ಚುವರಿ ಸಿಬಂದಿ ನಿಯೋಜನೆ ಮಾಡಲಾಗುವುದು ಎಂದು ಕೋಸ್ಟ್ ಗಾರ್ಡ್ ಮೂಲಗಳು ತಿಳಿಸಿವೆ.


Aware others:

Leave a Reply

Your email address will not be published. Required fields are marked *

error: Content is protected !!