ಕೋಟ – ಮಣೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನೂತನ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾಗಿ ಸತೀಶ್.ಹೆಚ್. ಕುಂದರ್ ಆಯ್ಕೆ

ಕೋಟ: ಮಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನೂತನ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾಗಿ ಸತೀಶ್.ಹೆಚ್. ಕುಂದರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಆಯ್ಕೆ ಪ್ರಕ್ರಿಯೆಯ ಏಪ್ರಿಲ್ 18 ರಂದು ಶುಕ್ರವಾರ ನಡೆಯಿತು. ಸಭೆಯಲ್ಲಿ ಸತೀಶ್.ಹೆಚ್. ಕುಂದರ್ ಅವರನ್ನು ಮುಂದಿನ ಮೂರು ವರ್ಷಗಳ ಅವಧಿಗೆ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಸಮಿತಿಯ ಸದಸ್ಯರಾಗಿ ಅರ್ಚಕ ರವಿ ಐತಾಳ್, ಅಶೋಕ್ ಶೆಟ್ಟಿ ಕೊಯ್ಕೂರು, ಕೃಷ್ಣ ದೇವಾಡಿಗ ಹರ್ತಟ್ಟು, ಅಚ್ಯುತ ಹಂದೆ ಮಣೂರು, ದಿನೇಶ್ ಆಚಾರ್ಯ ಮಣೂರು, ಸುಫಲ ಶೆಟ್ಟಿ ಮಣೂರು, ದಿವ್ಯ ಪ್ರಭು ಮಣೂರು, ಚಂದ್ರ ಹರ್ತಟ್ಟು ಆಯ್ಕೆಯಾದರು.