ಕುಂದಾಪುರ: ಪ್ಯಾಟಿ ಮಕ್ಕಳ್ ಹಳ್ಳಿ ಟೂರ್ 2025 – ಹೆಚ್.ಎಂ.ಎಂ. ವಿಕೆಆರ್ ಶಾಲೆಯಲ್ಲಿ ಮನಸೆಳೆದ ಮಕ್ಕಳ ಸಂತೆ
ಕುಂದಾಪುರ: ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್.ಎಮ್.ಎಮ್ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ವಿ.ಕೆ.ಆರ್ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢಶಾಲೆ ವತಿಯಿಂದ ಆಯೋಜಿಸಲಾದ ಪ್ಯಾಟಿ ಮಕ್ಕಳ್ ಹಳ್ಳಿ ಟೂರ್ 2025 ಸೀಸನ್ 3 ಬೇಸಿಗೆ ಶಿಬಿರದ ವತಿಯಿಂದ ಶಾಲೆಯಲ್ಲಿ ಮಕ್ಕಳ ಸಂತೆ ನಡೆಯಿತು.







ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಪ್ರಗತಿಪರ ಕೃಷಿಕ ಗುಂಡು ಪೂಜಾರಿ ಹರವರಿ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಮಕ್ಕಳು ಶಿಕ್ಷಣದ ಜೊತೆಗೆ ಜೀವನ ಕೌಶಲ್ಯಗಳನ್ನು ಕಲಿತುಕೊಂಡಾಗ ಬದುಕು ಸುಲಭವಾಗುತ್ತದೆ ರೈತರ ಕಷ್ಟ ನಷ್ಟಗಳನ್ನು ಅರಿತುಕೊಳ್ಳುವುದರ ಜೊತೆಗೆ ವ್ಯವಹಾರ ಜ್ಞಾನವನ್ನು ಬೆಳೆಸಿಕೊಂಡಾಗ ಶಿಕ್ಷಣ ಸಾರ್ಥಕವಾಗುತ್ತದೆ. ಪ್ರತಿಯೊಬ್ಬರೂ ರೈತ ಅಥವಾ ಕೃಷಿಕನಿಗೆ ಗೌರವ ಕೊಟ್ಟಾಗ ದೇಶ ಸಮೃದ್ಧವಾಗುತ್ತದೆ ಎಂದರು.






ಮುಖ್ಯ ಶಿಕ್ಷಕ ಜಗದೀಶ್ ಆಚಾರ್ ಪ್ರಾಸ್ತವಿಸಿ, ಶಿಕ್ಷಣ ಜೊತೆಗೆ ಪ್ರಾಯೋಗಿಕವಾಗಿ ಹಣಕಾಸಿನ ವಿನಿಮಯ, ವ್ಯವಹಾರ ಜ್ಞಾನ, ಗ್ರಾಹಕರ ಜೊತೆಗೆ ಸಂವಹನ, ಚೌಕಾಶಿ ಮಾಡುವ ನೈಪುಣ್ಯತೆಗಳನ್ನು ಮಕ್ಕಳ ಸಂತೆಯ ಮೂಲಕ ಕಲಿಕೆಗೆ ಅವಕಾಶ ಮಾಡಲಾಗಿದೆ ಎಂದರು.





ಮಕ್ಕಳು ತಾವು ತಂದಿರುವ ವಿವಿಧ ತಿಂಡಿ – ತಿನಿಸುಗಳು, ಹಣ್ಣು – ತರಕಾರಿಗಳು, ತಂಪು ಪಾನೀಯಗಳು, ನೈಸರ್ಗಿಕ ಹಣ್ಣುಗಳು, ವಿವಿಧ ಬಗೆಯ ಔಷಧೀಯ ಸಸ್ಯಗಳನ್ನು ಸಂತೆಯಲ್ಲಿ ಮಾರಾಟ ಮಾಡಿದರು. ಶಿಕ್ಷಕರು ಪೋಷಕರು ಹಾಗೂ ಶಿಬಿರಾರ್ಥಿಗಳು ಪರಸ್ಪರ ಖರೀದಿ ಚೌಕಾಶಿ ಮೂಲಕ ವ್ಯವಹರಿಸಿದರು. ಸಂಸ್ಥೆಯ ವಿವಿಧ ವಿಭಾಗಗಳ ಮುಖ್ಯಸ್ಥರು, ಶಿಕ್ಷಕ ಮತ್ತು ಶಿಕ್ಷಕೇತರ ವರ್ಗದವರು ಹಾಗೂ ಎಲ್ಲಾ ಶಿಬಿರಾರ್ಥಿಗಳು ಉಪಸ್ಥಿತರಿದ್ದರು. ಶಿಕ್ಷಕಿ ಆಶಾ ನಿರೂಪಿಸಿ ವಂದಿಸಿದರು.