BlogCrime newsEconomyHighlightsHuman storiesLifestyleLocal newsOthersState newsTop StoriesTrending

ನೆಲಗಡಲೆ ಬೀಜ ಖರೀದಿಸಿ ವಂಚನೆ, ಕೊಲೆ ಬೆದರಿಕೆ – ಪೊಲೀಸ್ ದೂರು

Aware others:

ಕುಂದಾಪುರ: ನೆಲಗಡಲೆ ಬೀಜ ವ್ಯಾಪಾರಸ್ಥರು ಒಬ್ಬರಿಗೆ ಟನ್ ಗಟ್ಟಲೆ ಶೇಂಗಬೀಜ ಖರೀದಿಸಿ ವಂಚಿಸಿದ್ದಲ್ಲದೆ ಕೊಲೆ ಬೆದರಿಕೆ ಹಾಕಿದ ಘಟನೆ ಬೈಂದೂರು ಪೊಲೀಸ್ ಠಾಣೆ ವ್ಯಾಪ್ತಿಯ ಉಪ್ಪುಂದದಲ್ಲಿ ನಡೆದಿದೆ. ಉಪ್ಪುಂದದ ಸತ್ಯನಾರಾಯಣ ಇಂಡಸ್ಟ್ರೀಸ್ ಮಾಲೀಕ ಗಣೇಶ್ ಎಂಬುವವರೇ ವಂಚನೆಗೊಳಗಾದವರು. 

ಆರೋಪಿ ಬಶೀರ್

ಗಣೇಶ್ ಕಳೆದ ಹತ್ತು ವರ್ಷದಿಂದ ಉಪ್ಪುಂದದಲ್ಲಿ ಶ್ರೀ ಸತ್ಯನಾರಾಯಣ ಇಂಡಸ್ಟ್ರೀಸ್ ನಡೆಸಿಕೊಂಡು ಬರುತ್ತಿದ್ದು ಶೇಂಗಾ ಬೀಜ ಮತ್ತು ಅದಕ್ಕೆ ಸಂಬಂಧಿಸಿದ ವ್ಯವಹಾರಗಳನ್ನು ಮಾಡುತ್ತಿದ್ದರು. ಮಾರ್ಚ್ 19ರಂದು ಅಮಿತ್‌ ಸೇಲ್ಸ್‌ ಕಾರ್ಪೋರೇಶನ್‌ ಸಂಸ್ಥೆಯ ಪಾಲುದಾರ ಎಂದು ಪರಿಚಯಿಸಿದ ಬಶೀರ್ ಎಂಬಾತ ಉಪ್ಪುಂದದ ಗಣೇಶ ಎಂಬುವರ ಬಳಿ 3500 ಕೆ.ಜಿ ಶೇಂಗಾ ಬೀಜ ವ್ಯವಹಾರ ನಡೆಸಿದ್ದಾನೆ. ಅದೇ ದಿನ ಸಂಜೆ ಗಣೇಶ ಎಂಬುವರ ಲಾರಿಯಲ್ಲಿ ಗಣೇಶ್ ಅವರ ಚಾಲಕ ಮೊಯ್ದೀನ್ ಆರೋಪಿ ಶೇಂಗವನ್ನು ತುಂಬಿಸಿಕೊಂಡು ನಿಪ್ಪಾಣಿಗೆ ಹೋಗಿದ್ದಾನೆ. 

ಬಳಿಕ ನಿಪ್ಪಾಣಿ ಟೋಲ್‌ ಬಳಿ ಲಾರಿ ಚಾಲಕ ಮೋಯಿದ್ದೀನ್‌ನಲ್ಲಿ ಕ್ರಾಸಿಂಗ್‌ ಮಾಡಿಕೊಂಡು ಮಾಲನ್ನು ತೆಗೆದುಕೊಂಡು ಹೋಗುವ ಎಂದು ಹೇಳಿ ನಿಪ್ಪಾಣಿ ಚೆಕ್‌ ಪೋಸ್ಟ್‌ ಬಳಿ ಲಾರಿ ನಿಲ್ಲಿಸಲು ಸೂಚಿಸಿದ್ದಾನೆ. ಅದೇ ಸಂದರ್ಭ ಆರೋಪಿ ಬಶೀರ್ ಹಾಗೂ ಅಲ್ಲಿಯೇ ಇದ್ದ ಮೂವರು ಅಪರಿಚಿತರೊಂದಿಗೆ ಮಹಾರಾಷ್ಟ್ರ ನೋಂದಣಿಯ ಇನ್ನೊಂದು ದಾರಿಯಲ್ಲಿ ಶೇಂಗಾ ಬೀಜ ತುಂಬಿಸಿಕೊಂಡು ಅವರ ವಾಹನದಲ್ಲಿ ಚಾಲಕ ಮೊಹೀದೀನ್‌ ರವರನ್ನು ಕುಳ್ಳಿರಿಸಿಕೊಂಡು ಕ್ರಾಸಿಂಗ್‌ ಮಾಡಿದ ಸ್ಥಳದಿಂದ ಸುಮಾರು 10 ಕಿ.ಮಿ ದೂರದ ನಿರ್ಜನ ಪ್ರದೇಶಕ್ಕೆ ಚಾಲಕ ಮೊಹೀದೀನ್‌ ರವರನ್ನು ಅವರ ವಾಹನದಲ್ಲಿ ಕರೆದುಕೊಂಡು ಹೋಗಿ ಮೊಹೀದೀನ್‌ ರವರನ್ನು ಅವರ ಲಾರಿಯಿಂದ ಕೆಳಗೆ ಇಳಿಸಿ ಚಾಲಕನಿಗೆ ಬೆದರಿಕೆ ಹಾಕಿ ಶೇಂಗಾ ಬೀಜ ಹಾಗೂ ಬಿಲ್ಲಿನೊಂದಿಗೆ ಪರಾರಿಯಾಗಿದ್ದಾನೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Aware others:

Leave a Reply

Your email address will not be published. Required fields are marked *

error: Content is protected !!