BlogCrime newsEconomyGovernmentHighlightsHuman storiesLifestyleLocal newsOthersTop StoriesTrending

ಅಕ್ರಮ ಕಲ್ಲುಕೋರೆಗೆ ಪೊಲೀಸ್ ದಾಳಿ -ಟಿಲ್ಲರ್, ಮಷೀನ್ ಹಾಗೂ ಸ್ವತ್ತುಗಳ ವಶ

Aware others:

ಕುಂದಾಪುರ: ಗಣಿ ಇಲಾಖೆಯಿಂದ ಯಾವುದೇ ಅನುಮತಿ ಪಡೆದುಕೊಳ್ಳದೆ ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿದ್ದ ಕೆಂಪು ಕಲ್ಲು ಕೋರೆಗೆ ಕೊಲ್ಲೂರು ಪೊಲೀಸರು ದಾಳಿ ನಡೆಸಿದ್ದಾರೆ. 

ಸಾಂದರ್ಭಿಕ ಚಿತ್ರ

ಫೈಝಲ್ ಮತ್ತು ಬಿಜು ಸಿ ಕೆ ಯಾನೆ ವಿಲ್ಸನ್ ಎಂಬುವರು ಸಂಬಂಧ ಪಟ್ಟ ಇಲಾಖೆಯಿಂದ ಯಾವುದೇ ಪರವಾನಿಗೆ ಪಡೆಯದೆ ಕೆಂಪು ಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಕೊಲ್ಲೂರು ಪೊಲೀಸ್ ಠಾಣೆಯ ಎಸ್ ಐ ವಿನಯ್ ಎಂ ಕೊರ್ಲಹಳ್ಳಿ ದಾಳಿ ನಡೆಸಿದ್ದಾರೆ. 

ದಾಳಿಯ ಸಂದರ್ಭ ಸ್ಥಳದಲ್ಲಿದ್ದ ಕೆಂಪು ಕಲ್ಲು ತೆಗೆಯಲು ಬಳಸಿದ ಟಿಲ್ಲರ್‌, ಕೆಂಪು ಕಲ್ಲು ಎತ್ತಲು ಉಪಯೋಗಿಸಿದ ಟ್ರಾಲಿ ಮಿಶಿನ್‌, ಮೊಳೆ, ಹಾರೆ, ಪಿಕ್ಕಾಸು ಮತ್ತು ಕೆಂಪು ಕಲ್ಲುಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ


Aware others:

Leave a Reply

Your email address will not be published. Required fields are marked *

error: Content is protected !!