BlogCulturalEconomyEntertainmentFashionHighlightsHuman storiesLifestyleLocal newsOthersReligionTop StoriesTrending

ಮಾರ್ಚ್ 28ರಂದು ಕುಂಭಾಶಿಯಲ್ಲಿ ನಾಗಮಂಡಲೋತ್ಸವ – ವೇ. ಮೂ. ಲಕ್ಷ್ಮೀಶ ಅಡಿಗ

Aware others:

ಕುಂದಾಪುರ: ಮಾರ್ಚ್ 28ರಂದು ಕುಂಭಾಶಿಯ ನಾಗಚಲ ಪಿ ಅಯ್ಯಪ್ಪ ಸ್ವಾಮಿ ಮತ್ತು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಠಾರದಲ್ಲಿ ನಾಗಮಂಡಲ ಉತ್ಸವ ನಡೆಯಲಿದೆ ಎಂದು ವೇದಮೂರ್ತಿ ಲಕ್ಷ್ಮೀಶ ಅಡಿಗ ಹೇಳಿದ್ದಾರೆ.

ಕುಂಭಾಶಿಯಲ್ಲಿ ನೂತನವಾಗಿ ಶೃಂಗೇರಿ ಶಂಕರ ಮಠ ಸ್ಥಾಪಿಸುವ ನಿಮಿತ ಲೋಕ ಕಲ್ಯಾಣಕ್ಕಾಗಿ ಶೃಂಗೇರಿ ಜಗದ್ಗುರುಗಳ ದಿವ್ಯ ಉಪಸ್ಥಿತಿಯಲ್ಲಿ ಶ್ರೀ ಶಾರದಮ್ಮನವರ ಮತ್ತು ಶ್ರೀ ಶಂಕರಾಚಾರ್ಯರ ಪ್ರತಿಷ್ಠಾ ಮಹೋತ್ಸವ ಮತ್ತು ಶ್ರೀ ಅಯ್ಯಪ್ಪ ಸ್ವಾಮಿ ಹಾಗೂ ಶ್ರೀ ದುರ್ಗಾಪರಮೇಶ್ವರಿ ದೇವರಿಗೆ ಬ್ರಹ್ಮ ಕಲಶೋತ್ಸವ, ಸಾರ್ವಜನಿಕ ಅನ್ನಸಂತರ್ಪಣೆ ಹಾಗೂ ನಾಗಮಂಡಲೋತ್ಸವ ನಡೆಯಲಿದೆ. ಮಾರ್ಚ್ 25 ರಿಂದ ಮಾರ್ಚ್ 28ರ ವರೆಗೆ ನಡೆಯುವ ಈ ಕಾರ್ಯಕ್ರಮದಲ್ಲಿ 21 ಕ್ಷೇತ್ರದಲ್ಲಿ ಸಾಧನೆ ಮಾಡಿದ 555 ಮಹನೀಯರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದರು. 

ಶೃಂಗೇರಿ ಶ್ರೀ ಶಾರದಾ ಪೀಠಂ ಇದರ ಪ್ರಾಂತೀಯ ಧರ್ಮಾಧಿಕಾರಿಗಳಾದ ವೇದಮೂರ್ತಿ ಲೋಕೇಶ್ ಅಡಿಗ ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವೇದ ಪಂಡಿತರು, ಶಾಸ್ತ್ರ ಪಂಡಿತರು, ಕುಲ ಪೌರೋಹಿತ್ಯ ವಹಿಸಿದವರು, ಪ್ರತಿ ವರ್ಷ ಶಂಕರ ಜಯಂತಿ ನಡೆಸುತ್ತಿರುವ ಸಂಸ್ಥೆಗಳು, ಆನೆಗುಡ್ಡೆ ಸ್ಥಳೀಯ ಮಹನೀಯರು, ವೈದ್ಯಾಧಿಕಾರಿಗಳು, ವಕೀಲರು, ಆರಕ್ಷಕರು, ದೇಶ ಕಾಯುವ ಯೋಧರು, ಹೆಸರಾಂತ ಸಂಘಟನೆಗಳ ಅಧ್ಯಕ್ಷರು, ಇತರೆ ವಿಷಯದಲ್ಲಿ ಸಾಧನೆ ಮಾಡಿದವರು, ಸಾಹಿತಿಗಳು, ನಾಗ ಪಾತ್ರಿಗಳು, ದೈವ ನರ್ತಕರು, ಅತ್ಯುತ್ತಮ ಅಧ್ಯಾಪಕರು, ಪಾಕಶಾಸ್ತ್ರಜ್ಞರು, ದೇವಸ್ಥಾನದ ಸಂಸ್ಥಾಪಕರು, ದೇವಸ್ಥಾನದ ಧರ್ಮದರ್ಶಿಗಳು, ವಿದ್ಯಾಲಯಗಳ ಸಂಸ್ಥಾಪಕರು, ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸಿದವರು, ಬ್ರಾಹ್ಮಣ ಸಂಘಟನೆ ಅಧ್ಯಕ್ಷರು ಮತ್ತು ಮಹಿಳಾ ಅಧ್ಯಕ್ಷರು, ವಾದ್ಯ ವೃಂದದವರು, ದೇವಸ್ಥಾನದ ಸಿಬ್ಬಂದಿ ವರ್ಗದವರು ಹೀಗೆ 555 ಮಹನೀಯರಿಗೆ ಗುರುತಿಸಿ ಸನ್ಮಾನಿಸಲಾಗುತ್ತದೆ ಎಂದರು 

ಕಾರ್ಯಕ್ರಮದ ಪ್ರಯುಕ್ತ ಮಾರ್ಚ್ 25ರಂದು ಜಗದ್ಗುರು ಶಂಕರಾಚಾರ್ಯ ಭಾರತಿ ತೀರ್ಥ ಸ್ವಾಮಿಗಳ ತತ್ಕರಕಮಲ ಸಂಜಾತರಾದ ಜಗದ್ಗುರು ಶ್ರೀ ವಿಧುಶೇಖರ ಭಾರತಿ ಮಹಾಸ್ವಾಮಿಗಳವರು ಆಗಮಿಸಲಿದ್ದಾರೆ. ಬಳಿಕ ನೂತನವಾಗಿ ನಿರ್ಮಿಸಲಾದ ಶ್ರೀ ಭಾರತಿತೀರ್ಥ ಸಭಾಭವನದ ಉದ್ಘಾಟನೆಯಾಗಲಿದೆ ಎಂದು ಲಕ್ಷ್ಮೀಶ ಅಡಿಗ ತಿಳಿಸಿದರು. ಮಾರ್ಚ್ 27ರಂದು ಅಯ್ಯಪ್ಪ ದೇವರಿಗೆ ಬ್ರಹ್ಮಕಲಶೋತ್ಸವ, ಶಿಖರಕ್ಕೆ ಕುಂಭಾಭಿಷೇಕ, ಶ್ರೀ ದುರ್ಗಾಪರಮೇಶ್ವರಿ ದೇವರಿಗೆ ಬ್ರಹ್ಮಕಲಶೋತ್ಸವ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಅಲ್ಲದೆ ಕುಣಿತ ಭಜನೆ, ಸ್ಥಳೀಯರಿಂದ ಮನೋರಂಜನಾ ಕಾರ್ಯಕ್ರಮಗಳು, ಕಲ್ಲಡ್ಕ ವಿಠಲ್ ನಾಯಕ್ ಇವರಿಂದ ಗೀತ ಗಾಯನ, ಯಕ್ಷಗಾನ, ತಾಳಮದ್ದಳೆ, ನೃತ್ಯ ರೂಪಕ ನಾಟಕ, ವಿದ್ವಾನ್ ಹಿರಣ್ಯ ವೆಂಕಟೇಶ ಭಟ್ ಇವರಿಂದ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ ಎಂದರು.

ಈ ಎಲ್ಲಾ ಕಾರ್ಯಕ್ರಮಗಳಿಗೆ ಸದ್ಭಕ್ತರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಅವರು ಮನವಿ ಮಾಡಿದರು.


Aware others:

Leave a Reply

Your email address will not be published. Required fields are marked *

error: Content is protected !!