ರೈಲಿಗೆ ತಲೆ ಕೊಟ್ಟು ಅವರಿಚಿತ ಯುವಕ ಸಾವು
ಕುಂದಾಪುರ: ಉಡುಪಿಯಿಂದ ಬಾರ್ಕೂರು ಕಡೆಗೆ ಚಲಿಸುತ್ತಿದ್ದ ಮತ್ಸ್ಯಗಂಧಾ ಎಕ್ಸ್ ಪ್ರೆಸ್ ರೈಲಿಗೆ ಅಪರಿಚಿತ ಯುವಕನೊಬ್ಬ ತಲೆಕೊಟ್ಟ ಪರಿಣಾಮ ಯುವಕ ಛಿದ್ರ ಛಿದ್ರವಾದ ಘಟನೆ ಭಾನುವಾರ ಸಂಜೆ ಚಾಂತಾರು ಗ್ರಾಮದ ಹಾಲು ಡೈರಿ ಹತ್ತಿರ ಇರುವ ರೈಲ್ವೇ ಟ್ರ್ಯಾಕ್ ನಲ್ಲಿ ನಡೆದಿದೆ.
ಮೃತಪಟ್ಟ ಯುವಕನನ್ನು ಸುಮಾರು 25 ರಿಂದ 35 ಪ್ರಾಯದ ವ್ಯಕ್ತಿ ಎಂದು ಗುರುತಿಸಲಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.