BlogCulturalEntertainmentFashionHighlightsHuman storiesLifestyleLocal newsOthersReligionState newsSuccess storiesTop StoriesTrendingWomen Care

ಉಪ್ಪುಂದ: ಆಚಾರ್ಯ ಕೇಶವ ಜೀ ಬೆಳ್ಳಿ ನೇತೃತ್ವದಲ್ಲಿ ಕೊಲ್ಲೂರು ಪಾದಯಾತ್ರೆ ಸಂಪನ್ನ – ತಿರುಪತಿಗೆ ಸಾಗಿದ ಯಾತ್ರೆ

Aware others:

ಕುಂದಾಪುರ: ಮೇ 10ರಂದು ಬೈಂದೂರಿನ ಯಡ್ತರೆ ನೆಲ್ಯಾಡಿ ಬೈಲಿನಲ್ಲಿ ನಡೆಯಲಿರುವ ವೈಭವದ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವದ ನಿಮಿತ್ತ ಸಿದ್ಧ ಸಮಾಧಿ ಯೋಗ ಬೈಂದೂರು ವಲಯ, ಕರಾವಳಿ ವಿಭಾಗದ 5ನೆ ವರ್ಷದ ಪಾದಯಾತ್ರೆಯು ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದದಿಂದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಆಚಾರ್ಯ ಶ್ರೀ ಕೇಶವ್ ಜಿ ಸಾರಥ್ಯದಲ್ಲಿ ಸಾಗಿ ಸಂಪನ್ನಗೊಂಡಿತು.

ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಪಾದಯಾತ್ರೆಗೆ ಚಾಲನೆ ನೀಡಿದರು. ಬೆಳಿಗ್ಗೆ 4 ಗಂಟೆಗೆ ದೇವರ ಸ್ತುತಿ ಮತ್ತು ಭಜನೆಯೊಂದಿಗೆ ನಮ್ಮ ಕೊಲ್ಲೂರು ಪಾದಯಾತ್ರೆ ಪ್ರಾರಂಭವಾಯಿತು. ಸುಮಾರು ಒಂದು ಸಾವಿರಕ್ಕೂ ಅಧಿಕ ಮಂದಿ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು. ಕೊಲ್ಲೂರು ದೇವಸ್ಥಾನ ಟ್ರಸ್ಟ್ ವತಿಯಿಂದ ಭಕ್ತಾದಿಗಳಿಗೆ ಬೆಳಗಿನ ಉಪಹಾರ ಮತ್ತು ಕಷಾಯವನ್ನು ಏರ್ಪಾಡು ಮಾಡಿಸಿ ಎಲ್ಲಾ ಪಾದಯಾತ್ರಿಗಳಿಗೆ ಶೀಘ್ರದರ್ಶನ ವ್ಯವಸ್ಥೆ ಕಲ್ಪಿಸಿದರು.

ಉಪ್ಪುಂದ ಪಾಂಡುರಂಗ ಖಾರ್ವಿಯವರು ದಾರಿ ಮಧ್ಯೆ 2 ಕಡೆಗಳಲ್ಲಿ ಪಾನಕ ವ್ಯವಸ್ಥೆಯನ್ನು  ಮಾಡಿದರು. ಅನಿಲ್ ಶೇಟ್ ಬಾಳೆಹಣ್ಣು ಒದಗಿಸಿದ್ದರು.  ಶ್ರೀಗಣೆಶ್ ಗಾಣಿಗ ಮೈಕ್ ಮತ್ತು ಆಟೋ ವ್ಯವಸ್ಥೆ,  SVMS ಬಸ್ ಮಾಲೀಕರದ ಶಿವಾನಂದ ಗಾಣಿಗ ಅವರು ವಾಪಾಸು ಬರುವಾಗ ಉಚಿತ ಬಸ್ ವ್ಯವಸ್ಥೆ ಮಾಡಿದ್ದರು. SSY ಸೇವಕರಿಗೆ, RBJVM ಟ್ರಸ್ಟ್ ನ ಎಲ್ಲಾ ಟ್ರಸ್ಟಿಗಳಿಗೆ, ಸಿದ್ಧ ಸಮಾಧಿ ಯೋಗದ ಎಲ್ಲಾ ಸಾಧಕರೂ ಭಾಗವಹಿಸಿದ್ದರು.

ಕೊಲ್ಲೂರು ಸೌಪರ್ಣಿಕ ನದಿ ಹತ್ತಿರ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಪುರೋಹಿತರಾದ ಸುಬ್ರಮಣ್ಯ ಅಡಿಗ ಮತ್ತು ಸಂದೇಶ ಭಟ್ ವೇದಘೋಷದೊಂದಿಗೆ ಸ್ವಸ್ತಿಕ್ ವಾಚನ ಮಾಡಿದರು.  ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಜೊತೆಗಿದ್ದರು.

ಅಲ್ಲಿಂದ ಮುಂದುವರೆದ ಪಾದಯಾತ್ರೆ  ಒಟ್ಟು 139 ಕಿ.ಮೀ ಕ್ರಮಿಸಿದೆ. ಎರಡನೇ ದಿನ ನೆರಳಕಟ್ಟೆ ವೆಂಕಟರಮಣ ದೇವಸ್ಥಾನದಲ್ಲಿ ವಾಸ್ತವ್ಯ ಮಾಡಿ, 3ನೇ ದಿನ ಹುಲಿಕಲ್ ಘಾಟಿ ಶ್ರೀ ಚಂದಿಕಾಂಬಾ ದೇವಸ್ಥಾನದಲ್ಲಿ ಮತ್ತು ಬುಧವಾರ ರಂಜತ್ ಕಟ್ಟೆಯ ಕೋದಂಡರಾಮ ದೇವಸ್ಥಾನದಲ್ಲಿ ವಾಸ್ತವ್ಯ ಹೂಡಿದೆ.


Aware others:

Leave a Reply

Your email address will not be published. Required fields are marked *

error: Content is protected !!