ಕೃಷಿಯತ್ತ ಯುವ ಪೀಳಿಗೆ ಮನಸ್ಸು ಮಾಡಬೇಕು – ಕೃಷಿ ಸವಲತ್ತು ವಿತರಿಸಿ ಶಾಸಕ ಗಂಟಿಹೊಳೆ


ಬೈಂದೂರು: ಹೊಸ ತಲೆಮಾರಿನ ಯುವ ಪೀಳಿಗೆಗಳು ಗ್ರಾಮೀಣ ಕೃಷಿಯತ್ತ ಮನಸ್ಸು ಮಾಡಬೇಕು. ಆಯಾ ಮೂಲಕ ಹಿರಿಯರು ನಂಬಿಕೊಂಡು ಬಂದ ಭೂಮಿಯನ್ನು ಉಳಿಸಿ ಬೆಳೆಸುವಂತಾಗಬೇಕು ಎಂದು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದ್ದಾರೆ.

ಅವರು ಬೈಂದೂರು ತಾಲೂಕಿನ ಅರ್ಹ ಕೃಷಿಕರಿಗೆ ವಿವಿಧ ಸುಧಾರಿತ ಕೃಷಿ ಯಂತ್ರೋಪಕರಣಗಳನ್ನು ಬೈಂದೂರು ತಾಲೂಕು ಕಚೇರಿಯಲ್ಲಿ ವಿತರಿಸಿ ಮಾತನಾಡಿದರು. ಹಿರಿಯ ಕೃಷಿಕರೆಲ್ಲರೂ ಇಂದಿಗೂ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ಅವರಲ್ಲಿರುವಂತಹ ಕೃಷಿ ಉತ್ಸಾಹ ಯುವ ಪೀಳಿಗೆಗೆ ಆದರ್ಶವಾಗಬೇಕು. ಆಧುನಿಕ ಕೃಷಿ ಯಂತ್ರೋಪಕರಣಗಳು ಸಬ್ಸಿಡಿ ದರದಲ್ಲಿ ಸಿಗುತ್ತಿದೆ. ರೈತರು ಸಬ್ಸಿಡಿ ಸೌಲಭ್ಯ ಪಡೆಯಲು ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಿ ಎಂದರು.



ಇದೇ ಸಂದರ್ಭ ಬೈಂದೂರು ಹೋಬಳಿಯ ಸುಮಾರು 8 ಫಲಾನುಭವಿಗಳಿಗೆ ಪವರ್ ಸ್ಪ್ರೇಯರ್, 4 ರೈತರಗೆ ಪವರ್ ವೀಡರ್, ಇಬ್ಬರಿಗೆ ಪವರ್ ಟಿಲ್ಲರ್, ಒಬ್ಬರಿಗೆ ನಾಟಿಯಂತ್ರ, 4 ಜನ ರೈತರಿಗೆ ಪಂಪ್ ಸೆಟ್ ಹಾಗೂ ಪೈಪ್ ಸೇರಿದಂತೆ 19 ರೈತರಿಗೆ ವಿವಿಧ ಸವಲತ್ತು ವಿತರಿಸಲಾಯಿತು.