ಪ್ರವಾಸೋದ್ಯಮಕ್ಕೆ ಅವಕಾಶ ಸಿಕ್ಕಾಗ ಕರಾವಳಿ ಸಮೃದ್ಧ – ಸ್ಪೀಕರ್ ಯು.ಟಿ.ಖಾದರ್ ಅಭಿಮತ
ಕುಂದಾಪುರ: ಪ್ರವಾಸೋದ್ಯಮ ಅವಕಾಶಗಳುವಿಫುಲವಾಗಿದ್ದು, ಅದನ್ನು ಸರಿಯಾದ ರೀತಿಯ್ಲಿ ಬಳಸಿಕೊಂಡಾಗ ಕರಾವಳಿ ಸಮೃದ್ಧವಾಗಲಿದೆ ಎಂದು ಕರ್ನಾಟಕ ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಹೇಳಿದರು. ಅವರು ಭಾನುವಾರ ಕುಂದಾಪುರದ ಕೋಡಿಯಲ್ಲಿ ಟೀಂ ಕುಂದಾಪುರ ಹಮ್ಮಿಕೊಂಡಿದ್ದ ಕುಂದ ಉತ್ಸವದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಜಗತ್ತಿನ ಸಂಸ್ಕೃತಿಯ ಸಾರ ಭಾರತದಲ್ಲಿ ಕಾಣುತ್ತದೆ. ದೇಶದ ಸಂಸ್ಕೃತಿ ಕರ್ನಾಟಕದಲ್ಲಿಯೂ, ಕರ್ನಾಟಕದ ಸಂಸ್ಕೃತಿ ಕರಾವಳಿ ಜಿಲ್ಲೆಗಳಲ್ಲಿಯೂ ಪ್ರತಿನಿಧಿಸುತ್ತದೆ. ಟೀಂ ಕುಂದಾಪುರ ಹಮ್ಮಿಕೊಂಡ ಕುಂದ ಉತ್ಸವ ಸಹೋದರತೆ ಭ್ರಾತೃತ್ವದ ಪ್ರತೀಕ. ಇಂತಹಾ ಕಾರ್ಯಕ್ರಮಗಳು ಯುವಜನತೆಗೆ ನಮ್ಮ ಸಂಸ್ಕೃತಿಯನ್ನು ಸಾರುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಹೇಳಿದರು.


ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾಜೀ ಸಚಿವ, ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜೀ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಕರಾವಳಿಯ ಪ್ರತಿಭೆಗಳಿಗೆ ತಮ್ಮ ಪ್ರತಿಭೆಯನ್ನು ಹೊರಹಾಕಲು ಇಂತಹಾ ಕಾರ್ಯಕ್ರಮಗಳು ಅದ್ಭುತ ಅವಕಾಶ ನೀಡುವುದರ ಜೊತಗೆ ಪ್ರೇರಣೆಯಾಗಲಿದೆ ಎಂದರು. ಟೀಂ ಕುಂದಾಪುರದ ರೂವಾರಿ ದಿನೆಶ್ ಹೆಗ್ಡೆ ಮೊಳಹಳ್ಳಿ ಕುಂದ ಉತ್ಸವದ ಪರಿಕಲ್ಪನೆ, ಪ್ರವಾಸೋದ್ಯಮಗಳ ಅಭಿವೃದ್ಧಿಗೆ ಸರ್ಕಾರ ಮಾಡಬಹುದಾದ ಕ್ರಮಗಳ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.


ವೇದಿಕೆಯಲ್ಲಿ ಮಾಜೀ ಶಾಸಕರಾದ ಮೊಯಿದ್ದೀನ್ ಬಾವ, ಕೆ. ಗೋಪಾಲ ಪೂಜಾರಿ, ನಿವೃತ್ತ ಪೊಲೀಸ್ ಅಧಿಕಾರಿ ಜಿ.ಎ.ಬಾವಾ, ಹಿರಿಯ ಹಾಸ್ಯ ನಟ ಟೆನ್ನಿಸ್ ಕೃಷ್ಣ, ಚಿತ್ರ ನಿರ್ದೇಶಕ ಯಾಕೂಬ್ ಖಾದರ್ ಗುಲ್ವಾಡಿ, ಉದ್ಯಮಿಗಳಾದ ಪ್ರಸಾದ್ ಕಾಂಚನ್, ಯು ರಾಜೇಶ್ ಕಾರಂತ್, ಮುನಿಯಾಲು ಉದಯಕುಮಾರ್ ಶೆಟ್ಟಿ, ಮುನೀರ್ ಜನ್ನಾಲ್, ಸುರೇಂದ್ರ ಶೆಟ್ಟಿ, ಭಟ್ಕಳದ ಇನಾಯುತುಲ್ಲಾ ಶಾಬದ್ರಿ ಮೊದಲಾದವರು ಉಪಸ್ಥಿತರಿದ್ದರು. ಬಳಿಕ ಲೈವ್ ಆರ್ಕೆಸ್ಟ್ರಾ ಕಾರ್ಯಕ್ರಮ ನಡೆಯಿತು.