ಕುಂದಾಪುರ: ಶೈಕ್ಷಣಿಕ ಕ್ರಾಂತಿಗೆ ಮುನ್ನುಡಿ ಬರೆಯುತ್ತಿರುವ ನೂತನ ವಿದ್ಯಾಸಂಸ್ಥೆ ಸುಜ್ಞಾನ್ ಪಿಯು ಕಾಲೇಜು
ಮಕ್ಕಳ ಮನೋವಿಕಾಸಕ್ಕೆ ಸುಜ್ಞಾನ್ ಎಜ್ಯುಕೇಶನ್ ರಹದಾರಿ


ಕುಂದಾಪುರ: ಶಿಕ್ಷಣ ಕ್ಷೇತ್ರದಲ್ಲಿ 30 ವರ್ಷಕ್ಕೂ ಅಧಿಕ ಅನುಭವ ಹೊಂದಿರುವ, ಭೌತಶಾಸ್ತ್ರ ವಿಷಯದಲ್ಲಿ ಡಾಕ್ಟರೇಟ್ ಪದವಿ ಪಡೆದಿರುವ ಡಾ. ರಮೇಶ ಶೆಟ್ಟಿ ಯವರ ಅಧ್ಯಕ್ಷತೆಯ ಸುಜ್ಞಾನ ಎಜ್ಯುಕೇಶನ್ ಸಂಸ್ಥೆ ಇದೀಗ ಕರಾವಳಿಯಲ್ಲಿ ಹೊಸ ಶೈಕ್ಷಣಿಕ ಕ್ರಾಂತಿಯನ್ನು ಸೃಷ್ಟಿಸುವತ್ತ ದಿಟ್ಟ ಹೆಜ್ಜೆ ಇಡುತ್ತಿದೆ. ಇವರ ಜೊತೆಗೆ ಸಾಥ್ ನೀಡುತ್ತಿರುವ, CA/CS ತರಬೇತಿಗೆ ಹೆಸರಾದ ಶಿಕ್ಷಪ್ರಭಾ ಸಂಸ್ಥೆಯ ಸ್ಥಾಪಕರುಗಳಾಗಿರುವ ಪ್ರತಾಪಚಂದ್ರ ಶೆಟ್ಟಿ ಕಾರ್ಯದರ್ಶಿಯಾಗಿ, ಭರತ್ ಶೆಟ್ಟಿ ಖಜಾಂಚಿಯಾಗಿ ಸಂಸ್ಥೆಯನ್ನು ಉತ್ತುಂಗಕ್ಕೇರಿಸಲು ಪಣ ತೊಟ್ಟಿದ್ದಾರೆ.


ಸುಜ್ಞಾನ ಎಜುಕೇಶನ್ ಟ್ರಸ್ಟ್ ಶಿಕ್ಷಣ ಸಂಸ್ಥೆಯು ಕುಂದಾಪುರದ ಕೋಟೇಶ್ವರ ಹಾಲಾಡಿ ರಸ್ತೆಯಲ್ಲಿ ಸಿಗುವ ಗುಡ್ಡೆಯಂಗಡಿ ಸಮೀಪದ ಯಡಾಡಿ-ಮತ್ಯಾಡಿಯಲ್ಲಿ ‘ವಿದ್ಯಾರಣ್ಯ’ ಎಂಬ ತನ್ನ ಸ್ವಂತ ಜಾಗದಲ್ಲಿ ಸುಜ್ಞಾನ ಪಿ.ಯು ಕಾಲೇಜು ಸಂಸ್ಥೆಯನ್ನು ಆರಂಭಿಸಿದ್ದು, ಈಗಾಗಲೇ ಪ್ರಥಮ ಪಿ.ಯು.ಸಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವರ್ಷ 2024-25 ರಿಂದಲೇ CET/NEET/JEE ತರಬೇತಿ ಹಾಗೂ ವಾಣಿಜ್ಯ (ಕಾಮರ್ಸ್) ವಿದ್ಯಾರ್ಥಿಗಳಿಗೆ CA/CS ತರಬೇತಿಯನ್ನು ನೀಡಿ ಸ್ಪರ್ಧಾತ್ಮಕ ಪರೀಕ್ಷೆ ವಿದ್ಯಾರ್ಥಿಗಳನ್ನು ಸನ್ನದ್ದುಗೊಳಿಸುತ್ತಿದೆ.


ಸ್ಪರ್ಧಾತ್ಮಕ ಪರೀಕ್ಷೆಗೆ ಹೆಚ್ಚಿನ ಆದ್ಯತೆ: ಸುಜ್ಞಾನ ಎಜುಕೇಶನಲ್ ಟ್ರಸ್ಟ್ 2021 ರಿಂದಲೇ ಕುಂದಾಪುರದಲ್ಲಿ CET/NEET/JEE ಪರೀಕ್ಷೆ ಮತ್ತು CA/CS ಪರೀಕ್ಷೆಗೆ ಗುಣಮಟ್ಟದ ತರಬೇತಿಯನ್ನು ನೀಡಿ ಆತ್ಯಧಿಕ ರ್ಯಾಂಕ್ ಗಳನ್ನು ರ್ಯಾಂ ಕ್ಗಳನ್ನು ನೀಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ಸಂಸ್ಥೆಯಲ್ಲಿ ದೇಶದ ನಾನಾ ಭಾಗದ ಹೆಸರಾಂತ ಶಿಕ್ಷಣ ಸಂಸ್ಥೆಯಲ್ಲಿ JEE/ NEET ತರಬೇತುದಾರರಾಗಿ ಕಾರ್ಯ ನಿರ್ವಹಿಸಿರುವ ಅನುಭವವುಳ್ಳ ಬೋಧಕ ಸಿಬ್ಬಂದಿಗಳ ತಂಡ ಸಂಸ್ಥೆಯ ವಿದ್ಯಾರ್ಥಿಗಳಿಗೆ ನಿರಂತರ ತರಬೇತಿ ನೀಡುತ್ತಿದೆ.


ಅತ್ಯುತ್ತಮ ಹಾಸ್ಟೆಲ್ ಸೌಲಭ್ಯ : ಸುಜ್ಞಾನ ಎಜುಕೇಶನಲ್ ಟ್ರಸ್ಟ್ ನಲ್ಲಿ 3ನೇ ತರಗತಿಯಿಂದ 12 ನೇ ತರಗತಿಯ ತನಕ ಹಾಸ್ಟೆಲ್ ಸೌಲಭ್ಯದ ಅವಕಾಶವಿದ್ದು ವಿದ್ಯಾರ್ಥಿಗಳಿಗೆ ಸುಸಜ್ಜಿತವಾದ ಆಧುನಿಕ ಸೌಲಭ್ಯವುಳ್ಳ ಹಾಸ್ಟೆಲ್ ಜೊತೆಗೆ ವಿದ್ಯಾರ್ಥಿಗಳೊಂದಿಗೆ ಹಾಸ್ಟೆಲ್ ನಲ್ಲಿ Residential Teachers ಸೌಲಭ್ಯ ಒದಗಿಸಲಾಗಿದೆ. ಅಲ್ಲದೇ ಅತ್ಯುತ್ತಮ ಗುಣಮಟ್ಟದ ಗ್ರಂಥಾಲಯವನ್ನೂ ಸಂಸ್ಥೆ ಹೊಂದಿದೆ.


ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ: ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಶಿಕ್ಷಣ, ಸ್ಪರ್ಧಾತ್ಮಕ ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ ನೀಡುತ್ತಿದ್ದು, ಸ್ಪೋರ್ಟ್ ಮತ್ತು ಗೇಮ್ಸ್ ಗಳಿಗೂ ಆದ್ಯತೆ ನೀಡುತ್ತಿದೆ. ನೂರಾರು ಚಿನ್ನಗಳನ್ನೂ ಪಠ್ಯೇತರ ವಿಷಯಗಳಲ್ಲಿ ತನ್ನದಾಗಿಸಿಕೊಂಡಿರುವುದು ಸಂಸ್ಥೆಯ ಗರಿಮೆಯನ್ನು ಹೆಚ್ಚಿಸಿದೆ. ಚೆಸ್, ಯಕ್ಷಗಾನ, ಭರತನಾಟ್ಯ, ಸಂಗೀತ, ತಾಳ ಮತ್ತು ಚರ್ಮ ವಾದ್ಯಗಳ ತರಗತಿಗಳನ್ನೂ ನಡೆಸುತ್ತಾ ಬಂದಿದೆ. ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ನೂರಾರು ವಿಚಾರಗೋಷ್ಠಿ, ಚರ್ಚಾಗೋಷ್ಟಿಗಳನ್ನೂ ನಡೆಸುವ ಮೂಲಕ ಮಕ್ಕಳ ಮನೋವಿಕಾಸಕ್ಕೆ ದಾರಿ ಮಾಡಿಕೊಡುತ್ತಿದೆ.


ಉಚಿತ ಶಿಕ್ಷಣದ ಅವಕಾಶ : SSLC ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ 40 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣದ ಅವಕಾಶವಿದ್ದು CET/NEET/JEE ತರಬೇತಿಯನ್ನು ಕೂಡ ಉಚಿತವಾಗಿ ನೀಡಲಾಗುತ್ತದೆ. ಆಯ್ದ 40 ವಿದ್ಯಾರ್ಥಿಗಳಿಗೆ ಅವಕಾಶವಿದ್ದು ಆಸಕ್ತರು ಸಂಸ್ಥೆಯ ದೂರವಾಣಿ ಸಂಖ್ಯೆ 9964291755 / 8217527362 / 9845925983ಯನ್ನು ಸಂಪರ್ಕಿಸಬಹುದು. ಒಟ್ಟಿನಲ್ಲಿ ಯಡಾಡಿ ಮತ್ಯಾಡಿಯಲ್ಲಿರುವ ಸುಜ್ಞಾನ್ ಎಜ್ಯುಕೇಶನ್ ಟ್ರಸ್ಟ್ ಕರಾವಳಿ ಜಿಲ್ಲೆಗಳಲ್ಲಿ ಶಿಕ್ಷಣದ ಹೊಸ ಕ್ರಾಂತಿಯನ್ನು ಸೃಷ್ಟಿಸುವತ್ತ ದಿಟ್ಟ ಹೆಜ್ಜೆ ಇಡುತ್ತಿದೆ ಎಂದರೆ ಸುಳ್ಳಾಗದು.