ಉಡುಪಿ: ಮೆಸ್ಕಾಂ ನೌಕರರ ವಸತಿ ಸಹಕಾರ ಸಂಘಕ್ಕೆ ನೂತನ ನಿರ್ದೇಶಕರ ಅವಿರೋಧ ಆಯ್ಕೆ
ಉಡುಪಿ: ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ ನೌಕರರ ವಸತಿ ಸಹಕಾರ ಸಂಘ ನಿ.ಉಡುಪಿ ಇದರ ನಿರ್ದೇಶಕ ಮಂಡಳಿಯ 2025-30 ರ ಸಾಲಿನ5 ವರ್ಷಗಳ ಅವಧಿಗೆ ಎಲ್ಲಾ 13 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಸ್ಥಾಪಕ ಅಧ್ಯಕ್ಷ ಭಾಸ್ಕರ ಶೆಟ್ಟಿ. ಹಿರಿಯ ಸಂಘಟಕ ಸದಾನಂದ ಪೂಜಾರಿ, ಸಂಘಟನಾ ಕಾರ್ಯದರ್ಶಿ ಬಿ.ಎಂ ಫಯಾಜ್, ನೌಕರರ ಸಹಕಾರ ಸಂಘದ ಅಧ್ಯಕ್ಷ ಗಣರಾಜ್ ಭಟ್, ಕೇಂದ್ರ ಸಮಿತಿ ಸದಸ್ಯರಾದ ರಾಘವೇಂದ್ರ ಎಮ್ ಕುಂದಾಪುರ, ನವೀನ್ ಕುಮಾರ್ ಉಡುಪಿ ಮತ್ತಿತರರ ಬೆಂಬಲಿಗರ ತಂಡ, ವಸತಿ ಸಹಕಾರ ಸಂಘದ ಅಧ್ಯಕ್ಷ ವಿಠಲ ಕುಲಾಲ್ ನೇತೃತ್ವದಲ್ಲಿ ಅವಿರೋಧ ಆಯ್ಕೆ ನಡೆದಿದೆ.

ಭಾಗ್ಯ ಶ್ರೀ ಡಿ., ಕಿರಿಯ ಇಂಜಿನಿಯರ್ ಮಲ್ಪೆ (ಮಹಿಳಾ), ಸಿದ್ದ ಕುಲಾಲ, ಮಾಪಕ ಓದುಗ ಕುಂದಾಪುರ (ಸಾಮಾನ್ಯ), ದಿನೇಶ ಪುತ್ರನ್,ಮೆ.ದ-2 ಕೋಟ (ಹಿಂ. ವರ್ಗ-ಎ), ಕುಮಾರ, ವಿಭಾಗೀಯ ಕಛೇರಿ ಉಡುಪಿ (ಸಾಮಾನ್ಯ), ಸದಾನಂದ ಪೂಜಾರಿ, ಬೈಲೂರು ಉಡುಪಿ (ಸಾಮಾನ್ಯ), ಶರ್ವಿನ್ ಕುಮಾರ, ವಿಭಾಗೀಯ ಕಛೇರಿ ಉಡುಪಿ (ಸಾಮಾನ್ಯ),

ಜಯ ಕೆ ಕೋಟ್ಯಾನ್, ಪವರ್ಮ್ಯಾನ್ ಅಜೆಕಾರ್, (ಸಾಮಾನ್ಯ), ಶ್ವೇತಾ ನಾಯ್ಕ ಮೇಲ್ವಿಚಾರಕಿ ಉಡುಪಿ (ಮಹಿಳಾ), ಚಂದ್ರಕಾಂತ ಚಕ್ಕಡಿ, ಪವರ್ಮ್ಯಾನ್ ಉಡುಪಿ (ಪ.ಪಂ.), ಹರೀಶ್ ಕೆ ಬಾಬು, ಕಿರಿಯ ಇಂಜಿನಿಯರು ಉಡುಪಿ (ಪ. ಜಾ.), ಅಶೋಕ ಶೆಟ್ಟಿ, ಕಿರಿಯ ಇಂಜಿನಿಯರು ಕುಂಜಿಬೆಟ್ಟು (ಹಿಂ. ವರ್ಗ-ಬಿ), ಸುರೇಶ್ ಟಿ ಪಡುಬಿದ್ರೆ (ಸಾಮಾನ್ಯ), ವಿಠಲ ಕುಲಾಲ, ಮೆ.ದ.-2 ಉಡುಪಿ (ಸಾಮಾನ್ಯ)

ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ ನೌಕರರ ವಸತಿ ಸಹಕಾರ ಸಂಘ ನಿ.ಉಡುಪಿ ಹಾಗೂ ಪ್ರ.ದ.ಸ.ಸಹಕಾರ ಸಂಘಗಳ ಉಪನಿಬಂದಕರ ಕಛೇರಿಯ ಚುನಾವಣಾ ನಿರ್ವಾಚನಾಧಿಕಾರಿ ಕೆ .ಆರ್. ರೋಹಿತ್ ತಿಳಿಸಿದ್ದಾರೆ.