ಗಂಗೊಳ್ಳಿ :ಕೊಂಚಾಡಿ ಶಾಲೆಯಲ್ಲಿ ಮನೋದೈಹಿಕ ಕಾರ್ಯಾಗಾರ
ಕುಂದಾಪುರ: ಕೊಂಚಾಡಿ ರಾಧಾ ಶೆಣೈ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಖಾರ್ವಿಕೇರಿ ಗಂಗೊಳ್ಳಿ ಹಾಗೂ ಶಾಲೆಯ ಅಮೃತ ಮಹೋತ್ಸವ ವತಿಯಿಂದ ಮನೋದೈಹಿಕ ಬೆಳವಣಿಗೆ ಮತ್ತು ಭಾವನಾತ್ಮಕ ಬುದ್ಧಿಮತ್ತೆಯ ಪಾತ್ರ ಕಾರ್ಯಾಗಾರ ಶಾಲೆಯ ಸಭಾಂಗಣದಲ್ಲಿ ಶನಿವಾರ ನಡೆಯಿತು.

ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ರವಿಶಂಕರ ಖಾರ್ವಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಮಾಹೆ ಮಣಿಪಾಲ ವಿದ್ಯಾರ್ಥಿ ವ್ಯವಹಾರಗಳ ವಿಭಾಗದ ನಿರ್ದೇಶಕಿ ಗೀತಾ ಕೌನ್ಸಿಲರ್ ಸುಜಾತ ದೀಪಕ್, ಶ್ರೀರಾಯನ್ ಮಥಾಯಸ್, ಕೆಲ್ವಿನ್ ಡಿಸೋಜಾ, ಅರವಿಂದ್ ಪಾಂಡೆ, ಕರುಣ ದೇವಾಡಿಗ ಹಾಗೂ ಗಣೇಶ್, ಶಾಲಾ ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ದಿವಾಕರ್ ಖಾರ್ವಿ ಉಪಸಿತರಿದ್ದರು.
ಪ್ರಭಾರ ಮುಖ್ಯ ಶಿಕ್ಷಕಿ ಯಶೋಧ ಸ್ವಾಗತಿಸಿದರು. ಸಹಶಿಕ್ಷಕಿ ರಾಧಿಕಾ ಕೆ. ಕಾರ್ಯಕ್ರಮ ನಿರ್ವಹಿಸಿದರು. ಸಹಶಿಕ್ಷಕಿ ಶಾಂತಿ ಖಾರ್ವಿ ವಂದಿಸಿದರು.