ಅನಧಿಕೃತ ಕಲ್ಲುಕೋರೆಯಲ್ಲಿ ಸ್ಪೋಟ- ಕಾರ್ಮಿಕ ಗಂಭೀರ
ಕುಂದಾಫುರ: ಇತ್ತೀಚಿನ ದಿನಗಳಲ್ಲಿ ಅನಧಿಕೃತ ಕಲ್ಲುಕೋರೆಗಳು ಕಾನೂನಿನ ಕಣ್ಣು ತಪ್ಪಿಸಿ ನಡೆಯುತ್ತಿದ್ದು, ಬುಧವಾರ ಕಾರ್ಮಿಕನೊಬ್ಬ ಸ್ಫೋಟಕಕ್ಕೆ ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿದ್ದಾನೆ.
ಬ್ರಹ್ಮಾವರ ತಾಲೂಕು ಯಡ್ತಾಡಿ ಗ್ರಾಮದ ಗರಿಕೆ ಮಠ ದಲ್ಲಿರುವ ಮಹಮ್ಮದ್ ಬಶೀರ್ ಎಂಬುವವರ ಕಲ್ಲು ಕೋರೆಯಲ್ಲಿ ಕೆಲಸ ಮಾಡುತ್ತಿರುವ ವೇಳೆ ಸಂಜೆ ಸುಮಾರು 4.45ಕ್ಕೆ ಘಟನೆ ನಡೆದಿದ್ದು, ಕಲ್ಲುಕೋರೆಯಲ್ಲಿ ಕೆಲಸ ಮಾಡುತ್ತಿದ್ದ ಸೆಂಥಿಲ್ ಎಂಬ ಕಾರ್ಮಿಕ ಗಂಭೀರ ಗಾಯಗೊಂಡು ಬ್ರಹ್ಮಾವರದ ಆಸ್ಪತ್ರೆಗೆ ದಾಖಲಾಗಿದ್ದಾನೆ.
ಶರತ್ ಹಾಗೂ ಮಹಮ್ಮದ್ ಬಶೀರ್ ಎಂಬುವವರು ಯಡ್ತಾಡಿ ಗ್ರಾಮದ ಸರ್ವೇ ನಂ 145/P1 ರಲ್ಲಿ 1.00 ಎಕರೆ ವಿಸ್ತೀರ್ಣದಲ್ಲಿ ಕಟ್ಟಡ ಕಲ್ಲು ಉಪಖನಿಜ ಗಣಿಗಾರಿಕೆ ಮಾಡಿಕೊಂಡಿದ್ದು , ಕಲ್ಲುಕೋರೆಯಲ್ಲಿ ಯಾವುದೇ ಪರವಾನಿಗೆಯನ್ನು ಪಡೆಯದೇ ಸ್ಫೋಟಕಗಳನ್ನು ಅಕ್ರಮವಾಗಿ ತಂದು ಯಾವುದೇ ಮುನ್ನೆಚ್ಚರಿಕೆ ವಹಿಸದೇ ಸ್ಫೋಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಅಲ್ಲದೇ ಕೋರೆಯಲ್ಲಿ ಕಲ್ಲು ಒಡೆಯಲು ಸ್ಪೋಟಕ್ಕೆ ಬಳಸುವ ಮದ್ದುಗಳನ್ನು ಯಾವುದೇ ಮುನ್ನೆಚ್ಚರಿಕೆ ವಹಿಸದೇ ಕೋರೆಯಲ್ಲಿ ಬಳಸುತ್ತಿರುವುದರಿಂದ ಅದು ಒಮ್ಮೆಲೇ ಸ್ಪೋಟಗೊಂಡಿದೆಯೆನ್ನಲಾಗಿದೆ. ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 25/2025 ಕಲಂ: 288 BNS, 3,5,6 Explosive Substances Act 1908 And U/S 9 B Explosive Act 1884, U/S 4 (I-A) , 21 (4) MMRD Act ರಂತೆ ಪ್ರಕರಣ ದಾಖಲಾಗಿದೆ.