AccidentAuto worldBlogCrime newsHighlightsLifestyleLocal newsOthersTop StoriesTrending

ಕುಂದಾಪುರ: ನಿಂತಿದ್ದ ಬಸ್ ಚಲಿಸಿ ಅಪಘಾತ – ಕಾರು ಜಖಂ

Aware others:

ಕುಂದಾಪುರ: ಖಾಸಗೀ ಬಸ್ ಡಿಪ್ಪೋ ಒಂದರಲ್ಲಿ ನಿಲ್ಲಿಸಿದ್ದ ಬಸ್ ಚಾಲಕನಿಲ್ಲದ ವೇಳೆ ತನ್ನಿಂದ ತಾನೇ ಚಲಿಸಿ ರಾಷ್ಟ್ರೀಯ ಹೆದ್ದಾರಿ ದಾಟಿ ಡಿವೈಡರ್ ಹತ್ತಿ ಇನ್ನೊಂದು ಪಕ್ಕಕ್ಕೆ ಸರಿದು ನಿಲ್ಲಿಸಿದ್ದ ಕಾರಿಗೆ ಡಿಕ್ಕಿ ಹೊಡೆದು ನಿಂತ ಘಟನೆ ಕುಮದಾಪುರದ ಅಂಕದಕಟ್ಟೆ ಸಮೀಪದ ದುರ್ಗಾಂಬಾ ಬಸ್ ಡಿಪೋ ಹಾಗೂ ನಗು ಪ್ಯಾಲೇಸ್ ಮುಂಭಾಗ  ಇಂದು ಬೆಳಿಗ್ಗೆ ನಡೆದಿದೆ.

ಸೋಮವಾರ ಬೆಳಿಗ್ಗೆ 7.41ರ ಸುಮಾರಿಗೆ ಈ ಘಟನೆ ನಡೆದಿದ್ದು, ಸಮೀಪದ ಸಿಸಿ ಟಿವಿಯಲ್ಲಿ ಬಸ್ ಚಲಿಸಿ ಡಿಕ್ಕಿ ಹೊಡೆದ ಚಿತ್ರ ಸೆರೆಯಾಗಿದೆ. ಬೆಳಿಗ್ಗೆ 7.41ರ ಹೊತ್ತಿಗೆ ಘಟನೆನಡೆದಿದೆ. ಬಸ್ ಚಾಲಕ ಬಸ್ಸನ್ನು ಚಾಲನೆಯಲ್ಲಿಟ್ಟು ಊದುಬತ್ತಿ ಹಚ್ಚಿ, ಪೂಜೆ ಸಲ್ಲಿಸಿ ಕೆಳಗೆ ಇಳಿದಿದ್ದ . ಚಾಲಕ ಹೊಗೆ ಹೋದ ಕೆಲವೇ ಕ್ಷಣದಲ್ಲಿ ನಿಂತಿದ್ದ ಬಸ್ ಚಲಿಸಿದೆ. ರಾಷ್ಟ್ರೀಯ ಹೆದ್ದಾರಿಗೆ ಮುಖ ಮಾಡಿ ನಿಲ್ಲಿಸಿದ್ದ ಬಸ್ ನೇರವಾಗಿ ಹೆದ್ದಾರಿ ಪ್ರವೇಶಿಸಿದೆ. ಬಳಿಕ ಹೆದ್ದಾರಿಯನ್ನು ದಾಟಿ ನಡುವೆ ಇದ್ದ ಡಿವೈಡರ್ಗೆ ಅಳವಡಿಸಲಾಗಿದ್ದ ಕಬ್ಬಿಣದ ಬೇಲಿಯನ್ನು ಮುರಿದು ನಗು ಪ್ಯಾಲೇಸ್ ಪಾರ್ಕಿಂಗ್ ಜಾಗಕ್ಕೆ ನುಗ್ಗಿದೆ. ಬಳಿಕ ಅಲ್ಲಿ ನಿಲ್ಲಸಲಾಗಿದ್ದ ಆಲ್ಟೋ ಕಾರಿಗೆ ಡಿಕ್ಕಿ ಹೊಡೆದು ಕಾರನ್ನು ಮುಂದಕ್ಕೆ ಎಳೆದೊಯ್ದು ನಗು ಪ್ಯಾಲೇಸ್ ಗೋಡೆಗೆ ಕಾರನ್ನು ಒತ್ತಿದ ಬಳಿಕ ಬಸ್ ನಿಂತಿದೆ. ಬಸ್ ನಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷದಿಂದ ಈ ಅವಘಡ ಸಂಭವಿಸಿದೆ ಎನ್ನಲಾಗಿದ್ದು, ಅದೃಷ್ಟವಶಾತ್ ಹೆದ್ದಾರಿಯಲ್ಲಿಯಲ್ಲಿ ವಾಹನ ಸಂಚಾರಿ ವಿರಳವಾಗಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ.


Aware others:

Leave a Reply

Your email address will not be published. Required fields are marked *

error: Content is protected !!