ಬ್ರಹ್ಮಾವರ: ಶಿರಿಯಾರ ಸೊಸೈಟಿಯಲ್ಲಿ ಕೋಟ್ಯಂತರ ಅವ್ಯವಹಾರ – ತನಿಖೆಗೆ ಆಗ್ರಹ

ಕುಂದಾಪುರ: ಸಹಕಾರಿ ಸಂಘಗಳಲ್ಲಿ ನಡೆಯುತ್ತಿರುವ ಅವ್ಯವಹಾರಗಳು ಒಂದೊಂದಾಗಿ ಬೆಳಕಿಗೆ ಬರುತ್ತಿವೆ. ಇತ್ತೀಚೆಗೆ ಆಂಪಾರು ವ್ಯವಾಸಾಯಿಕ ಸಹಕಾರಿ ಮೂರೂವರೆ ಕೋಟಿ ಅವ್ಯವಹಾರ ನಡೆದಿರುವ ಆರೋಪ ಕೇಳಿಬಂದಿತ್ತು. ಅದರ ಬೆನ್ನಿಗೇ ಇದೀಗ ಬ್ರಹ್ಮಾವರ ತಾಲೂಕಿನ ಶಿರಿಯಾರ ವ್ಯವಸಾಯಿಕ ಸಹಕಾರಿ ಸಂಘದಲ್ಲಿ ಅವ್ಯವಹಾರ ನಡೆದಿದೆ ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ.


ಹೌದು. ಈ ಬಗ್ಗೆ ರಾಕೇಶ್ ಹಾಗೂ ಕುಶಲ ಶೆಟ್ಟಿ ಪತ್ರಿಕಾಗೋಷ್ಟಿ ನಡೆಸಿದ್ದು ಸೊಸೈಟಿಗೆ ಸಂಭಂದಿಸಿದ ಕಟ್ಟಡ ನಿರ್ಮಾಣದಲ್ಲಿ ಪಾರದರ್ಶಕ ಕಾಯ್ದೆ ಉಲ್ಲಂಘನೆ ಮಾಡಲಾಗಿದೆ. ಅಲ್ಲದೆ ಇಲಾಖೆಯ ಅನುಮತಿ ಪಡೆಯದೆ ಮೂರುವರೆ ಕೋಟಿ ಮೌಲ್ಯ ಎಂದು ತೋರಿಸಿ ಯಾವುದೇ ಈ ಟೆಂಡರ್ ಕರೆಯದೆ ಕಾನೂನುಬಾಹಿರವಾಗಿ ಕಟ್ಟಡ ನಿರ್ಮಿಸಲಾಗಿದೆ ಈ ಬಗ್ಗೆ ಕೂಲಂಕುಶ ತನಿಖೆ ನಡೆಸಬೇಕು ಎಂದು ರಾಕೇಶ್ ಅವರು ಆರೋಪಿಸಿದ್ದಾರೆ. ಸಹಕಾರಿ ಸಂಘದ ಕಾಯ್ದೆಯನ್ನು ಉಲ್ಲಂಘಿಸಿ ಮಾಡಲಾದ ನಿವೇಶನ ಖರೀದಿಯಲ್ಲಿ ಭಾರಿ ಮೊತ್ತದ ಅವ್ಯವಹಾರ ನಡೆಸಲಾಗಿದೆ. ಒಂದೂವರೆ ಕೋಟಿ ಮೌಲ್ಯವನ್ನು ತೋರಿಸಿ ಕೇವಲ 80 ಲಕ್ಷ ರೂಪಾಯಿ ನೀಡಲಾಗಿದೆ. ಅಲ್ಲದೆ ಜಮೀನು ಖರೀದಿಗೂ ಇಲಾಖೆಯ ಲಿಖಿತ ಅನುಮತಿ ಪಡೆದಿಲ್ಲ ಎಂದು ಆರೋಪಿಸಿದ ಅವರು, ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಶೆಟ್ಟಿ ಅವರ ವೇತನವನ್ನು ನಿಯಮ ಬಾಹಿರವಾಗಿ ಏರಿಸಿಕೊಂಡಿದ್ದಲ್ಲದೆ ಎಲ್ಲ ಸಿಬ್ಬಂದಿಗಳಿಗೂ ಎರಡು ವರ್ಷಕ್ಕೆ ಒಂದು ಬಾರಿಯಂತೆ ವಿಪರೀತ ವೇತನ ಪರಿಷ್ಕರಣೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ಸಾಲ ನೀಡಿಕೆಯಲ್ಲಿಯೂ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿರುವ ಬಗ್ಗೆ ದಾಖಲೆಗಳಿದ್ದು, ಈ ಎಲ್ಲಾ ಅವ್ಯವಹಾರಗಳಲ್ಲಿ ಸೊಸೈಟಿ ಅಧ್ಯಕ್ಷ ಪ್ರದೀಪ್ ಬಲ್ಲಾಳ್ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಶೆಟ್ಟಿ ಶಾಮೀಲು ಆಗಿದ್ದಾರೆ ಎಂದು ಆರೋಪಿಸಿದ ಅವರು, ಈ ಎಲ್ಲಾ ಅವ್ಯವಹಾರಗಳ ಬಗ್ಗೆ ಸಂಪೂರ್ಣ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಈ ಸಂದರ್ಭ ಸೊಸೈಟಿಯ ಇನ್ನೊಬ್ಬ ನಿರ್ದೇಶಕ ಕುಶಲಶೆಟ್ಟಿ ಉಪಸ್ಥಿತರಿದ್ದರು.
ವಿಡಿಯೋಕ್ಕಾಗಿ ಇಲ್ಲಿ ಕ್ಲಿಕ್ಕಿಸಿ 👇
https://www.facebook.com/share/v/1Ae9qCn8yV/