ಮಾಯಾಂಗನೆಗೆ ನಕಲಿ ಪೊಲೀಸ್ ಸಾಥ್ – ಹನಿ ಟ್ರ್ಯಾಪ್ನಲ್ಲಿ ಕೆಡವಲು ಹೋಗಿ ಪೊಲೀಸ್ ಬಲೆಗೆ ಬಿದ್ದ ಖದೀಮರು

ಬ್ಯಾಡರಹಳ್ಳಿ: ಆಕೆ ಸುರಸಂದರಾಂಗಿ, ಸೀತಾಪಹರಣಕ್ಕೆ ಮಾರೀಚ ಹೇಗೆ ಮಾಯಾ ಜಿಂಕೆಯಾದ್ನೋ ಹಾಗೇ ಇಲ್ಲಿ ಈ ಸುಂದರಾಂಗಿ ಮಾಯಾಂಗನೆಯಾಗಿದ್ದಳು. ನಾಲದಕು ಜನರ ತಂಡಕ್ಕೆ ಈ ಮಾಯಾಂಗನೇಯೇ ಗೇಂ ಪ್ಲಾನರ್.. ಬಂದಷ್ಟೇ ಕಿತ್ತುಕೊಂಡಿದ್ದರೆ ಹೆಚ್ಚೇನೂ ಸಮಸ್ಯೆಯಾಗುತ್ತಿರಲಿಲ್ಲವೇನೋ ಆದರೆ ಇನ್ನೂ ಬೇಕು ಎನ್ನುವ ಅತಿಯಾಸೆಗೆ ಸಿಕ್ಕಾಕ್ಕೊಂಡು ಹನಿಟ್ರ್ಯಾಪ್ ನಡೆಸಿದ್ದೇ ಈಗ ಪೊಲೀಸರಿಂದ ಗೂಸಾ ತಿನ್ನೋ ಹಾಗಾಗಿದೆ.

ಇತ್ತ 21 ವರ್ಷದ ಸುರ ಸುಂದರಾಂಗಿ ಸಿಕ್ಕೇ ಬಿಟ್ಳು ಅಂತ ಮದುವೆಯಾಗಿದ್ದ ಹೆಂಡ್ತಿಯನ್ನೂ ನೆನಪಿಸಿಕೊಳ್ಳದ ಆ 57ರ ಭೂಪ ಹಣ ಕೊಟ್ಟಿದ್ದಲ್ಲದೇ ಆಕೆಯ ಮನಗೇ ಟೀ ಕುಡಿಯೋಕೆ ಹೋಗಿ ಖೆಡ್ಡಾಕ್ಕೆ ಬಿದ್ದು ಇದ್ದುದೆಲ್ಲವನ್ನೂ ಕಳಕೊಂಡಿದ್ದ. ಹಾಗಿದ್ದರೆ ಏನಿದು ಸ್ಟೋರಿ ಅಂತೀರ? 57ರ ಆ ಅಂಕಲ್ ವೃತ್ತಿಯಲ್ಲಿ ಇಂಜಿನಿಯರ್. ಖರ್ಚಿಗಿಂತ ಹೆಚ್ಚು ದುಡ್ಡಿದ್ದರೆ ಏನ್ಮಾಡೋಣ.? ಏನಾದ್ರೂ ಮಾಡೋಣ ಅಂದ್ಕೊಳ್ತಿದ್ದಾಗಲೇ ಈ 21ರ ಸುಂದರಿ ಪರಿಚಯವಾಗಿದ್ದಾಳೆ. ದೋಸ್ತಿಯಾಗಿದ್ದೇ ಸಲಿಗೆ ಬೆಳೆದುಬಿಟ್ಟಿದೆ. ಅಯ್ಯೋ ಕಷ್ಟ ಅಂತಾ ಹಣ ಕೇಳಿದ್ದಾಳೆ. ಆಕೆಯ ಸೌಂದರ್ಯದ ಎದುರು ಆ ಅಂಕಲ್ ಗೆ ಹಣ ದೊಡ್ಡದಾಗಿರಲಿಲ್ಲ. ಮೊದಲಿಗೆ ಹತ್ತೂ ಇಪ್ಪತ್ತು ಅಂತಾ ಸಾವಿರದಲ್ಲಿ ಕೊಟ್ಟಿದ್ದಾನೆ. ಸಲಿಗೆ ಮತ್ತಷ್ಟು ಹೆಚ್ಚಾದಗ ಸುಂದ್ರಿಯ ಜೊತೆಗೆ ಮತ್ತೆ ಮೂವರು ಕಿರಾತಕರು ಸೇರಿಕೊಂಡಿದ್ದಾರೆ. ಪ್ಲಾನ್ ಮಾಡಿ ಡಿಸೆಂಬರ್ 9ರಂದು ಅಂಕಲ್ ನನ್ನು ಸುಂದ್ರಿ ಮನೆಗೆ ಟೀ ಕುಡಿಯೋಕೆ ಕರ್ದಿದ್ದಾಳೆ. ಆಕೆ ಕರೆದಾಗ ಹೋಗದೇ ಇದ್ರೆ ಆಗುತ್ಯೇ? ಈತನೂ ಖುಷಿಯಿಂದ ಅಲ್ಲಾಡಿಸ್ಕೊಂಡು ಬೈಕಿನಲ್ಲಿ ಹೋಗಿದ್ದಾನೆ.

ಅದಾಗಲೇ ಸುಂದ್ರಿಯ ಟೀಂ ಪೊಲೀಸ್ ಯೂನಿಫಾರ್ಮ್ ನಲ್ಲಿ ರೆಡಿ ಆಗಿ ವೇಟ್ ಮಾಡ್ತಿದ್ರು. ಆದ್ರೆ ಮಾಯಾಂಗನೆಯ ಸೌಂದರ್ಯದ ಗುಂಗಿನಲ್ಲಿದ್ದ ಅಂಕಲ್ ಗೆ ಇದ್ಯಾವುದೂ ಗೊತ್ತೇ ಆಗಿಲ್ಲ. ಅಂಕಲ್ ಒಳಗೆ ಹೋಗಿ ಬಾಗಿಲು ಹಾಕ್ಕೊಂಡ ಸ್ವಲ್ಪೇ ಹೊತ್ತಿಗೆ ನಕಲಿ ಪೊಲೀಸ್ ತಂಡದ ಮೂವರು ನಯನೆಯ ಮನೆಯೊಳಗೆ ಎಂಟ್ರಿ ಕೊಟ್ಟಿದ್ದಾರೆ. ಮತ್ತೆ ಗೊತ್ತೇ ಇದ್ಯಲ್ಲ ಏನಾಗಿರ್ಬಹುದೂಂತ.. ಬಟ್ಟೆ ಲ್ಲಾ ಬಿಚ್ಚಿಸಿ, ಬೆದರಿಸಿ, ಸೆಟ್ಲ ಮೆಂಟ್ ಮಾಡುವಂತೆ ಹೇಳಿ, ಅಂಕಲ್ ಬಳಿ ಇದ್ದ 29 ಸಾವಿರ ನಗದು, ಫೋನ್ ಪೇನಲ್ಲಿ 26ಸಾವಿರ ಹಾಗೂ ಮೈ ಮೇಲಿದ್ದ ಸುಮಾರು 5ಲಕ್ಷದ ಚಿನ್ನದ ಸರ, ಉಂಗುರ ಬ್ರಾಸ್ ಲೇಟ್ ಕಿತ್ತುಕೊಂಡು ಅಲ್ಲಿಂದ ಎಸ್ಕೇಪ್ ಆಗಿದ್ದಾರೆ.

ಆಯ್ತು.. ಇಷ್ಟಾದ ಮೇಲೆ ಅಂಕಲ್ ಈ ಸುಂದ್ರಿಗೆ ಸ್ಟೇಷನ್ ಗೆ ಹೋಗಿ ಕಂಪ್ಲೇಂಟ್ ಕೊಡೋಣ ಎಂದ್ರೆ ಯುವತಿ ವರಸೆ ಬದಲಾಯ್ಸಿದ್ದಾಳೆ! ಕಂಪ್ಲೇಂಟ್ ಕೊಟ್ರೆ ಮಗುನ್ನ ಕರ್ಕೊಂಡು ನಿಮ್ಮನೆಗೇ ಬರ್ತೇನೆ ಎಂದಿದ್ದಾಳೆ!. ದಿಕ್ಕು ಕಾಣದ ಅಂಕಲ್ ತಾನೇ ಧೈರ್ಯಮಾಡಿ ಬ್ಯಾಡರಹಳ್ಳಿ ಠಾಣೆಗೆ ದೂರು ನೀಡಿದ್ದಾನೆ. ಇಂಜಿನಿಯರ್ ದೂರು ನೀಡಿದ್ರೆ ಕೇಳ್ಬೇಕಾ?, ತಕ್ಷಣ ಅಲರ್ಟ್ ಆದ ಪೊಲೀಸ್ರು ಸಂತೋಷ್, ಅಜಯ್, ಜಯರಾಜ್ ಎಂಬುವರನ್ನ ಬಂಧಿಸಿದ್ದಾರೆ. ಆದ್ರೆ ಪಾಪ ನಯವಂಚಕಿ ನಯನಾ ಮಾತ್ರ ಿನ್ನೂ ಪೊಲೀಸ್ರಿಗೆ ಸಿಕ್ಕಿಲ್ವಂತೆ! ಪೊಲೀಸ್ರು ಸಿಕ್ಕಾಪಟ್ಟೆ ಹುಡುಕಾಟ ನಡೆಸ್ತಿದ್ದಾರಂತೆ! ಬ್ಯಾಡರಹಳ್ಳಿ ಠಾಣೆಯಲ್ಲಿ ಪ್ರಕರಣವಂತೂ ದಾಖಲಾಗಿದೆಯಂತೆ