ಕುಂದಾಪುರ: ಸಂಗೀತಕ್ಕೆ ಹೀಲಿಂಗ್ ಫವರ್ ಇದೆ – ಪ್ರಸಾದ್ ಕುಮಾರ್ ಕಲ್ಹಾಳ
ತ್ರಿಮಧುರ ಕಾರ್ಯಕ್ರಮ ಉದ್ಘಾಟಿಸಿದ ಪ್ರಸಾದ್ ಕಲ್ಲಹಾಳ ಮತ್ತು ದಿನಮಣಿ ಶಾಸ್ತ್ರಿ

ಕುಂದಾಪುರ: ಸಂಗೀತ, ನೃತ್ಯ ಕಲೆಗಳಿಗೆ ಹೀಲಿಂಗ್ ಫವರ್ ಇದೆ. ಅಭ್ಯಾಸ ಮಾಡಿದಷ್ಟು ಅಂತಃಶಕ್ತಿ ಹೆಚ್ಚಿಸುವ ಇಂತಹಾ ಕಲೆಗಳನ್ನು ಬೆಳೆಸುವುದರ ಜೊತೆಗೆ ತಾವೂ ತೊಡಗಿಸಿಕೊಂಡಾಗ ಒತ್ತಡದ ಬದುಕಿನಿಂದ ಪಾರಾಗಬಹುದು ಎಂದು ಕುಂದಾಪುರ ಸಂಚಾರಿ ಪೊಲೀಸ್ ಠಾಣೆಯ ಉಪನಿರೀಕ್ಷಕ ಪ್ರಸಾದ್ ಕುಮಾರ್ ಕಲ್ಲಹಾಳ ಹೇಳಿದರು.


ಅವರು ಶನಿವಾರ ಕುಂದಾಪುರದ ಸಾಧನಾ ಕಲಾ ಸಂಗಮ(ರಿ), ಅಪ್ರಮೇಯ (ರಿ) ಹಾಗೂ ಪರಪಂಚ (ರಿ) ಇವರ ಸಹಯೋಗದಲ್ಲಿ ಕುಂದಾಪುರದ ಸರ್ಕಾರೀ ಪದವಿ ಪೂರ್ವ ಕಾಲೇಜಿನ ರೋಟರಿ ಲಕ್ಷ್ಮೀ ನರಸಿಂಹ ಕಲಾಮಂದಿರದಲ್ಲಿ ಹಮ್ಮಿಕೊಳ್ಳಲಾದ “ತ್ರಿಮಧುರ” ಚಿತ್ರಕಲಾ ಪ್ರದರ್ಶನ, ಕರ್ನಾಟಕ ಸಂಗೀತ ಹಾಗೂ ಶಾಸ್ತ್ರೀಯ ಭರತನಾಟ್ಯ ಕಾರ್ಯಕ್ರಮದ ಸಭಾ ಕಾರ್ಯಕ್ರಮವನ್ನುಉದ್ಘಾಟಿಸಿ ಮಾತನಾಡಿದರು.



ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಖ್ಯಾತ ಅಂಕಣಕಾರ ಹಾಗೂ ಕಲಾವಿದ ದಿನಮಣಿ ಶಾಸ್ತ್ರಿ ಮಾತನಾಡಿ, ವಿವಿಧತೆಯಲ್ಲಿ ಏಕತೆಯನ್ನು ಸಾರುವ ನಮ್ಮ ದೇಶ ಕಲೆಮತ್ತು ಸಂಸ್ಖೃತಿಗೆ ವಿಶೇಷ ಸ್ಥಾನಮಾನ ನೀಡಿದೆ. ಅಂತಹಾ ದೇಶದ ಆಸ್ತಿಯಾಗಿರುವ ಕಲಾ ಪ್ರಾಕಾರಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.






ಸಾಧನಾ ಕಲಾ ಸಂಗಮ ಸಂಸ್ಥೆಯ ವಿಶ್ವಸ್ಥರಾದ ನಾರಾಯಣ ಐತಾಳ್ ಉಪಸ್ಥಿತರಿದ್ದರು. ಸಾಧನಾ ಕಲಾ ಸಂಗಮದ ವಿದ್ಯಾರ್ಥಿಗಳಾದ ಅಪೂರ್ವ ಹಾಗುಇ ವಾಣಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸಾಧನಾ ವಿದ್ಯಾರ್ಥಿನಿಯರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು.