ಕೋಟ: ಬೆಂಗಳೂರಿನ ಗುರುನರಸಿಂಹ ಕಲ್ಯಾಣ ಮಂಟಪದ ವ್ಯವಸ್ಥಾಪಕ ಸುರೇಶ್ ಹಂದೆ ನಿಧನ
ಕೋಟ :ಮಣೂರು ಶಿಕ್ಷಕ ದಿ. ಶಂಕರನಾರಾಯಣ ಹಂದೆಯವರ ಪುತ್ರ ಸುರೇಶ್ ಹಂದೆ (68) ಅವರು ಅಲ್ಪಕಾಲದ ಅಸೌಖ್ಯದಿಂದ ಬುಧವಾರ ನಿಧನರಾಗಿದ್ದಾರೆ.

ಇವರು ಬೆಂಗಳೂರಿನ ಗುರುನರಸಿಂಹ ಕಲ್ಯಾಣ ಮಂಟಪದ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಸಜ್ಜನರೂ ಸಹೃದಯಿಗಳೂ ಆಗಿದ್ದ ಸುರೇಶ್ ಹಂದೆಯವರು ಕೊಡುಗೈ ದಾನಿಯಾಗಿದ್ದರು. ಅನೇಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವ ಮೂಲಕ ವಿದ್ಯಾಪೋಷಕರಾಗಿದ್ದರು. ಅನೇಕ ದೇವಾಲಯಗಳಿಗೆ, ಸಂಘ ಸಂಸ್ಥೆಗಳಿಗೆ ಆರ್ಥಿಕವಾಗಿ ಸಹಕಾರ ನೀಡುತ್ತಿದ್ದರು. ಇವರು ಪತ್ನಿ, ಸಹೋದರರು, ಸಹೋದರಿಯರನ್ನು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.