ವಿಠಲವಾಡಿ: ಸಂಭ್ರಮದ ಗಣೇಶೋತ್ಸವ ಸಂಪನ್ನ
ಕುಂದಾಪುರ: ಇಲ್ಲಿನ ವಿಠಲವಾಡಿ ಗಣೇಶೋತ್ಸವ ಸಮಿತಿ ವತಿಯಿಂದ ನಡೆಸಲಾದ ಗಣೇಶೋತ್ಸವ ಕಾರ್ಯಕ್ರಮ ಶನಿವಾರ ಸಂಜೆ ಸಂಪನ್ನಗೊಂಡಿತು.

ಶನಿವಾರ ರಾತ್ರಿ ಪುರಮೆರವಣಿಗೆ ನಡೆಯಿತು. ವಿವಿಧ ಭಜನಾ ತಂಡಗಳು ಮೆರವಣಿಗೆ ಯುದ್ಧಕ್ಕೂ ಕುಣಿತ ಭಜನೆಯ ಮೂಲಕ ಸಾಗಿ ಬಂದು ಭಕ್ತರಿಗೆ ಮನೋರಂಜನೆ ನೀಡಿದವು. ಕೀಲುಕುದುರೆಗಳು, ಬೊಂಬೆಗಳು ಕುಣಿಯುತ್ತಾ ಸಾಗಿದವು. ಮೆರವಣಿಗೆಯಲ್ಲಿ ಡಿಜೆ ಸಂಗೀತಕ್ಕೆ ಭಕ್ತರು ಹೆಜ್ಜೆ ಹಾಕಿದರು.





ರಾತ್ರಿ ನಡೆದ ಪುರಮೆರವಣಿಗೆಯಲ್ಲಿ ವಿಠಲವಾಡಿಯಿಂದ ಸಾಗಿ, ಭಂಡಾರ್ಕಾರ್ಸ್ ರಸ್ತೆ ಮೂಲಕ ಶಾಸ್ತ್ರೀ ವೃತ್ತ ಮೂಲಕ ಪಾರಿಜಾತ ವೃತ್ತದಲ್ಲಿ ತಿರುಗಿ ಹಿಂತಿರುಗಿ ಬಂದು ಗಣೇಶನ ವಿಸರ್ಜನೆ ನಡೆಸಲಾಯಿತು.
ವಿಡಿಯೋ ನೋಡಲು ಇಲ್ಲಿ ಕ್ಲಿಕ್ಕಿಸಿ https://youtu.be/O1y8C4VX2Jc?si=8KFO5SW39oXnRm0G
