BlogHighlightsLifestyleLocal newsOthersReligionState newsTop StoriesTrending

ಹಟ್ಟಿಯಂಗಡಿ: ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಸಂಭ್ರಮದ ಗಣೇಶೋತ್ಸವ

Aware others:

3 ಸಾವಿರಕ್ಕೂ ಹೆಚ್ಚು ಭಕ್ತರರಿಂದ ಗಣಪನ ದರ್ಶನ

ಕುಂದಾಪುರ: ದೇಶದೆಲ್ಲೆದೆಡೆ ಗಣೇಶನ ಚೌತಿ ಸಂಭ್ರಮದಿಂದ ನಡೆಯುತ್ತಿರುವಂತೆ ಕುಂದಾಪುರ ತಾಲೂಕಿನ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಶನಿವಾರದಿಂದ ಮೂರಿ ದಿನಗಳ ಕಾಲ ನಡೆಯುವ ಗಣೇಶ ಚತುರ್ಥಿಯು ಸಂಭ್ರಮದಿಂದ ಚಾಲನೆಗೊಂಡಿತು. 

ಶನಿವಾರ ಬೆಳಗ್ಗಿನಿಂದಲೇ ಭಕ್ತರು ಗಣೇಶನ ದರ್ಶನ ಪಡೆದರು. ”ಶ್ರೀ ಮಹಾಗಣಪತಿ ಹೋಮ ಸಂಕಲ್ಪ, ಅಷ್ಟೋತ್ತರ ಸಹಸ್ರ ನಾಳಿಕೇರ ಮಹಾಗಣಯಾಗ (1008 ತೆಂಗಿನಕಾಯಿ) ಪೂರ್ಣಾಹುತಿ, ಮಹಾಪೂಜೆ, ಮಹಾ ಸಂತರ್ಪಣೆ, ಸಂಜೆ ಶ್ರೀ ಕದ್ರಿ ರಮೇಶನಾಥ್ ಮತ್ತು ಬಳಗದವರಿಂದ ವಿಶೇಷ ವಾದ್ಯಗೋಷ್ಠಿ ನಡೆಯಿತು.

ಆದಿತ್ಯವಾರ 108 ಶ್ರೀ ಸತ್ಯಗಣಪತಿ ವ್ರತ ಹಾಗೂ ಕಥಾ ನಿರೂಪಣೆ ಮತ್ತು ಮೋದಕ ಹವನ, ಮಧ್ಯಾಹ್ನ ಮಹಾಪೂಜೆ, ಮಹಾಮಂಗಳಾರತಿ,  ಸಂಜೆ ಶ್ರೀ ನಟರಾಜ ನೃತ್ಯ ನಿಕೇತನ, ಸಾಲಿಗ್ರಾಮ ಇವರಿಂದ ನೃತ್ಯ ಸೌರಭ ನಡೆಯಲಿದೆ. ಸೋಮವಾರ ಬೆಳಿಗ್ಗೆ ಲಕ್ಷ ದೂರ್ವಾರ್ಚನೆ ಮತ್ತು ಸಿಂಧೂರಾರ್ಚನೆ ನಡೆಯಲಿದೆ. ಸಂಜೆ ಧಾರ್ಮಿಕ ಸಭೆ ಹಾಗೂ ಸನ್ಮಾನ ಸಮಾರಂಭದಲ್ಲಿ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಹಾಗೂ ಅರ್ಹ ಫಲಾನುಭವಿಗಳಿಗೆ ಸಹಾಯಧನ ವಿತರಣೆ ಮತ್ತು ಸನ್ಮಾನ, ಬಳಿಕ ಶ್ರೀ ಕೃಪಾ ಪೋಷಿತ ಯಕ್ಷಗಾನ ಮಂಡಳಿ, ಹಟ್ಟಿಯಂಗಡಿ ಇವರಿಂದ ಪವಿತ್ರ ಬಂಧನ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್ಕಿಸಿ

👇

https://youtube.com/watch?v=URbpu8iiMCY&si=KDJDf2REluMMVd-9


Aware others:

Leave a Reply

Your email address will not be published. Required fields are marked *

error: Content is protected !!