ಬಿದ್ಕಲ್ ಕಟ್ಟೆ: ಸಾಹಿತ್ಯ ಸಮ್ಮೇಳನದಲ್ಲಿ ಹಾಡಿನ ಮೂಲಕ ಗಮನ ಸೆಳೆದ ತಹಸೀಲ್ದಾರ್

ಕುಂದಾಪುರ: ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕುಂದಾಪುರ ತಹಸೀಲ್ದಾರ್ ಭಾಷಣಕ್ಕೆ ಹೆಚ್ಚು ಒತ್ತು ನೀಡದೇ, ಕನ್ನಡದ ಸಾಹಿತ್ಯವನ್ನು ಹಾಡುವ ಮೂಲಕ ಜನಮನ್ನಣೆಗೆ ಪಾತ್ರರಾಗಿದ್ದಾರೆ.
ಭಾನುವಾರ ಬಿದ್ಕಲ್ ಕಟ್ಟೆಯ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಹಮ್ಮಿಕೊಳ್ಳಲಾದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕುಂದಾಪುರ ತಹಸೀಲ್ದಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಸಭಾಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, ಎನಿತು ಚೆಲುವಿನ ನಾಡು ಚೆಲುವು ಚಿಮ್ಮುವ ನಾಡು ಎನ್ನುವ ಹಾಡನ್ನು ಸುಶ್ರಾವ್ಯವಾಗಿ ಹಾಡಿ ಕನ್ನಡದ ಮನಸ್ಸುಗಳನ್ನು ಗೆದ್ದರು.