BlogEducationGovernmentHighlightsLifestyleLocal newsOthersState newsTop StoriesTrending

ಬೈಂದೂರು: ತ್ರೀ ಪಿ ಮೂಲಕ ತ್ರೀ ಹಂಡ್ರೆಡ್ ಟ್ರೀಸ್ ಅನುಷ್ಟಾನಕ್ಕೆ ಶಾಲಾ ಮಟ್ಟದ ಭಾಗವಹಿಸುವಿಕೆ ಅಗತ್ಯ – ಶಾಸಕ ಗುರುರಾಜ್ ಗಂಟಿಹೊಳೆ

Aware others:

ಬೈಂದೂರು: ಸಮೃದ್ಧ ಬೈಂದೂರು ಕನಸಾಗಿರವ ತ್ರೀ ಹಂಡ್ರೆಡ್ ಟ್ರೀಸ್ ಯೋಜನೆ ಅನುಷ್ಟಾನಕ್ಕೆ ತ್ರೀ ಪಿ (ಪಬ್ಲಿಕ್, ಪ್ರೈವೇಟ್ ಪಾರ್ಟ್ನರ್ ಶಿಪ್) ಮೂಲಕ ಉನ್ನತೀಕರಿಸಲು, ಅಗತ್ಯ ಸೌಲಭ್ಯ ಒದಗಿಸಲು ಪೂರಕವಾಗುವಂತೆ ಪ್ರತಿಯೊಂದು ಶಾಲೆಯೂ ತಮ್ಮ ತಮ್ಮ ಹಂತದಲ್ಲಿಯೇ ಹಳೇ ವಿದ್ಯಾರ್ಥಿಗಳ ಸಹಕಾರ ಪಡೆದು ಕಂಪನಿ ಗಳ ಸಿ ಎಸ್ ಆರ್ ಅನುದಾನ ಬಳಸಿ ಕೊಳ್ಳಲು ಪ್ರಯತ್ನಿಸಬೇಕು. ಅಲ್ಲದೇ ಊರಿನ ದಾನಿಗಳ ಮೂಲಕ ಅಭಿವೃದ್ಧಿಗೆ ಕೊಡುಗೆ ಪಡೆಯುವಂತೆ ಶಾಸಕ ಗುರುರಾಜ್ ಗಂಟಿಹೊಳೆ ಕರೆ ನೀಡಿದರು. 

ಮಂಗಳವಾರ ಬೈಂದೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಬೈಂದೂರು ವಲಯದ ಸರಕಾರಿ ಹಾಗೂ ಅನುದಾನಿತ ಪ್ರೌಢ ಶಾಲೆಗಳ ಶಾಲಾಭಿವೃದ್ಧಿ ಮತ್ತು ಮೆಲುಸ್ತುವಾರಿ ಸಮಿತಿ ಮುಖ್ಯಸ್ಥರು, ಶಾಲಾ ಮುಖ್ಯಶಿಕ್ಷಕರು, ಶಿಕ್ಷಕರು  ಸಭೆಯಲ್ಲಿ ಮಾತನಾಡಿದರು.

ಎಸ್ ಡಿಎಂಸಿ, ಶಿಕ್ಷಕರು, ಹಳೇ ವಿದ್ಯಾರ್ಥಿ ಸಂಘ ಪರಸ್ಪರ ಸಮನ್ವಯದಿಂದ ಶಾಲೆಯ ಸರ್ವಾಂಗೀಣ ಶ್ರೇಯೋಭಿವೃದ್ಧಿಗೆ  ಒಟ್ಟಾಗಿ  ಶ್ರಮಿಸಬೇಕು. ಈಗಾಗಲೆ

ಸಮೃದ್ಧ ಬೈಂದೂರು ಪರಿಕಲ್ಪನೆಯ 300 ಟ್ರೀಸ್  ಯೋಚನೆಗೆ ಸಹಕರಿಸುತ್ತಿರುವ ದಾನಿಗಳ ಹಾಗೂ ಸರಕಾರೆತರ ಸಂಸ್ಥೆ ಗಳ ಬೆಂಬಲ ಸ್ಮರಣೀಯ ಎಂದ ಅವರು, ಹಲವು ಶಾಲೆಗಳಲ್ಲಿ ಕಟ್ಟಡಗಳ ಪರಿಸ್ಥಿತಿ ಚಿಂತಾಜನಕವಾಗಿದ್ದು ಈ ಬಗ್ಗೆ ಕೂಡಲೇ ಶಾಲಾಭಿವೃದ್ಧಿ ಸಮಿತಿ ಕ್ರಮ ವಹಿಸಿ ಇಲಾಖೆ ಯ ಮೇಲಿನ ಹಂತಕ್ಕೆ ವರದಿ ಮಾಡಬೇಕು ಮತ್ತು ಅದರ ನಿರಂತರ ಫಾಲೋಪ್ ಕೂಡ ಮಾಡಬೇಕು. ಶಿಥಿಲಾವಸ್ಥೆಯಲ್ಲಿರುವ  ಕಟ್ಟಡಗಳಲ್ಲಿ ವಿದ್ಯಾರ್ಥಿ ಗಳನ್ನು ಕೂರಿಸದೆ ಮಕ್ಕಳ ಸುರಕ್ಷತೆ ಕಡೆಗೆ ಗಮನ ಹರಿಸಿ ಎಂದರು. ಬೈಂದೂರು ವಲಯದ 14 ಸರ್ಕಾರಿ ಪ್ರೌಢ ಶಾಲೆ ಹಾಗೂ 5 ಅನುದಾನಿತ ಶಾಲೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.


Aware others:

Leave a Reply

Your email address will not be published. Required fields are marked *

error: Content is protected !!