ಹೊಸಾಡು: ಮುಳ್ಳಿಕಟ್ಟೆ ಸಿದ್ಧಲಿಂಗೇಶ್ವರ ಸ್ವಸಹಾಯ ಸಂಘದಿಂದ ಸ್ವಾತಂತ್ರ್ಯೋತ್ಸವ
ಕುಂದಾಪುರ : ಹೊಸಾಡು ಮುಳ್ಳಿಕಟ್ಟೆಯ ಸಿದ್ದಲಿಂಗೇಶ್ವರ ಸ್ವಸಹಾಯ ಸಂಘದ ವತಿಯಿಂದ ಸಿದ್ದಲಿಂಗೇಶ್ವರ ಭಜನಾ ಮಂಡಳಿಯ ಬಳಿ ಸ್ವಾತಂತ್ರ್ಯ ದಿನಾಚರಣೆಯನ್ನು ಗುರುವಾರ ಆಚರಿಸಲಾಯಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೈಂದೂರು ತಾಲೂಕಿನ ಯೋಜನಾಧಿಕಾರಿ ಕೆ.ವಿನಾಯಕ ಪೈ ಧ್ವಜಾರೋಹಣ ನೆರವೇರಿಸಿ ಮಾತಾಡಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಹೊಸಾಡು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಚಂದ್ರ ಪೂಜಾರಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪಡುಕೋಣೆ ವಲಯ ಅಧ್ಯಕ್ಷ ಚಂದ್ರ ಪೂಜಾರಿ, ತಾಲೂಕು ಜನಜಾಗೃತಿ ವೇದಿಕೆಯ ಸದಸ್ಯ ರಮೇಶ ಆಚಾರ್ಯ ಅರಾಟೆ, ಪಡುಕೋಣೆ ವಲಯದ ಭಜನಾ ಪರಿ?ತ್ ಸಂಯೋಜಕ ಮಂಜುನಾಥ ಊರಿನ ಮುಖಂಡರಾದ ಗೋಪಾಲ್ ಆಚಾರ್ಯ, ಪಡುಕೋಣೆ ವಲಯದ ಮೇಲ್ವಿಚಾರಕಿ ಪಾರ್ವತಿ, ಹೊಸಾಡು ಒಕ್ಕೂಟದ ಅಧ್ಯಕ್ಷೆ ನಾಗರತ್ನ, ನಿಕಟಪೂರ್ವ ಅಧ್ಯಕ್ಷೆ ವಸಂತಿ, ಸೇವಾ ಪ್ರತಿನಿಧಿ ನಾಗರತ್ನ, ಸಿದ್ದಲಿಂಗೇಶ್ವರ ಸ್ವಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.
