BlogHighlightsLocal newsOthersProtestState newsSuccess storiesTop StoriesTrending

ಬೈಂದೂರು: ಶಾಸಕ ಗಂಟಿ ಒಂಟಿಯಲ್ಲ ನಾವೆಲ್ಲ ಜಂಟಿ – ಗುರ್ಮೆ ಸುರೇಶ್ ಶೆಟ್ಟಿ

Aware others:

ಬೈಂದೂರು: ಶಾಸಕ ಗಂಟಿಹೊಳೆ ಒಂಟಿಯಲ್ಲ ಅವರ ಜೊತೆ ನಾವೆಲ್ಲ ಜಂಟಿಯಾಗಿ ನಿಲ್ಲುತ್ತೇವೆ ಉಡುಪಿ ಶಾಸಕರು ಮತ್ತು ಕುಂದಾಪುರ ಶಾಸಕರು ನಮ್ಮ ಜೊತೆ ಈಗ ಇದ್ದಾರೆ. ಕಾರ್ಕಳದ ಶಾಸಕರು ಬೆಂಗಳೂರಿನಲ್ಲಿದ್ದು ಅವರಿಗೂ ಮಾಹಿತಿ ಸಿಕ್ಕಿದೆ ಅವರು ಕೂಡ ಧರಣಿಯಲ್ಲಿ ಭಾಗವಹಿಸಲಿದ್ದಾರೆ ಮಹಾಭಾರತ ಯುದ್ಧದಲ್ಲಿ ಪಂಚಪಾಂಡವರು ಕುರುಕ್ಷೇತ್ರದಲ್ಲಿ ಹೇಗೆ ಜಯಶಾಲಿಗಳಾದರು ಅದೇ ರೀತಿ ನಾವು ಪಂಚ ಶಾಸಕರು ಪಾಂಡವರಂತೆ ಹೋರಾಡಿ ಗೆಲ್ಲುತ್ತೇವೆ ಎಂದು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದ್ದಾರೆ.

ಜಿಲ್ಲಾಡಳಿತದಿಂದ ಸಾಂವಿಧಾನಿಕ ಹಕ್ಕು ಚ್ಯುತಿ ನಡೆಯುಯುತ್ತಿದೆ ಎಂದು ಆರೋಪಿಸಿ ಆರಂಭಿಸಲಾದ ಬೈಂದೂರು ಕ್ಷೇತ್ರದ ಶಾಸಕ ಗುರುರಾಜ್ ಗಟ್ಟಿಹೊಳೆ ನೇತೃತ್ವದ ಧರಣಿ ಸ್ಥಳಕ್ಕೆ ಸೋಮವಾರ ತಡರಾತ್ರಿ ಆಗಮಿಸಿ ಭರವಸೆ ವ್ಯಕ್ತಪಡಿಸಿದರು.

ಜಿಲ್ಲಾಡಳಿತ ಶಾಸಕರ ಅಧಿಕಾರದ ನಡುವೆ ಹಸ್ತಕ್ಷೇಪ ನಡೆಸುತ್ತಿದೆ ಎಂದು ಆರೋಪಿಸಿದ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ದಿಡೀರನೆ ಸೋಮವಾರ ಸಂಜೆ ಬೈಂದೂರು ತಾಲೂಕು ಕಚೇರಿ ಎದುರು ಆಹೋ ರಾತ್ರಿ ಧರಣಿಗೆ ಕರೆ ಕೊಟ್ಟಿದ್ದರು. ಉಡುಪಿ ಜಿಲ್ಲೆಯ ಶಾಸಕರು  ಬೈಂದೂರು ಶಾಸಕರ ಧರಣಿಗೆ ಬೆಂಬಲ ಸೂಚಿಸಿದ್ದಾರೆ. ಈ ಸಂದರ್ಭ ಬೈಂದೂರು ಬಿಜೆಪಿಯ ನಾಯಕರಗಳಾದ ಬಿಎಸ್ ಸುರೇಶ್ ಶೆಟ್ಟಿ ರಾಘವೇಂದ್ರ ನೆಂಪು, ಗಣೇಶ್ ಗಾಣಿಗ ಮೊದಲಾದವರು ಉಪಸ್ಥಿತರಿದ್ದರು

ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ

https://youtu.be/WFHgz6HH3o4?si=DdLz-LMI9ee_Sls6


Aware others:

Leave a Reply

Your email address will not be published. Required fields are marked *

error: Content is protected !!