ಕುಂದಾಪುರ: ಪಡುವಾಲ್ತೂರು ಶಾಲೆಯಲ್ಲಿ ವನಮಹೋತ್ಸವ
ಕುಂದಾಪುರ: ಲಯನ್ಸ್ ಕ್ಲಬ್ ಕುಂದಾಪುರ ಕ್ರೌನ್ ವತಿಯಿಂದ ವನಮಹೋತ್ಸವದ ಅಂಗವಾಗಿ ಗಿಡಗಳನ್ನು ನೆಡುವ ಕಾರ್ಯಕ್ರಮ ಪಡುವಾಲ್ತುರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನಡೆಯಿತು. ಕ್ಲಬ್ ನ ಅಧ್ಯಕ್ಷ ಲ.ದಿನಕರ ಶೆಟ್ಟಿ ಜನನಿ ಅವರು ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯದರ್ಶಿ ಲ. ಶ್ರೀಧರ್ ಮರವಂತೆ, ಖಜಾಂಚಿ ಲ. ಜಗದೀಶ್ ವಾಸುದೇವ, ನಿಕಟ ಪೂರ್ವ ಅಧ್ಯಕ್ಷ ಲ. ಪ್ರವೀಣ್ ಕುಮಾರ್ ಶೆಟ್ಟಿ, ಸ್ಥಾಪಕ ಅಧ್ಯಕ್ಷ ಲ. ಕಿರಣ್ ಕುಂದಾಪುರ, ಸದಸ್ಯರಾದ ಮಹಮ್ಮದ್ ಅಶ್ರಫ್, ಹೆಚ್. ಪ್ರಭಾಕರ್ ಶೆಟ್ಟಿ, ಸುನಿಲ್ ಕುಮಾರ್ ಶೆಟ್ಟಿ ಮಲ್ಯಾಡಿ,ಸುಧಾಕರ್ ಪೂಜಾರಿ, ರಾಘವೇಂದ್ರ ಶೆಟ್ಟಿ, ಶಶಿರಾಜ್ ಕುಂದಾಪುರ, ಅಶೋಕ್ ಕುಮಾರ್, ಉಪಸ್ಥಿತರಿದ್ದರು, ಶಾಲಾ ಮಕ್ಕಳು ಹಾಗು ಶಿಕ್ಷಕ ಸಿಬ್ಬಂದಿಯರು ಭಾಗವಹಿಸಿದ್ದರು ಹೆಚ್. ಪ್ರಭಾಕರ ಶೆಟ್ಟಿ ಕಾರ್ಯಕ್ರಮ ಆಯೋಜಿಸಿದ್ದರು, ಶಾಲಾ ಶಿಕ್ಷಕರು ಮತ್ತು ಮಕ್ಕಳಿಗೆ ಸಿಹಿ ಹಂಚಲಾಯಿತು
