ಕೇರಳ: ದುರಂತದಲ್ಲಿ ಸಾವನ್ನಪ್ಪಿದ 36 ಜನರಿಗೆ 11ಕೋಟಿ ನೀಡಿದ ಎಲ್.ಐ.ಸಿ!
ಕುಂದಾಪುರ: ಕೇರಳ ರಾಜ್ಯದ ವಯನಾಡ್ ಭುಇಕುಸಿತದಿಂದ ಸಂಭವಿಸಿದ ದುರಂತದಲ್ಲಿ 155 ಜನ ಅಸುನಿಗಿದ್ದು, ಆ ಪೈಕಿ 36 ಜನ ಎಲ್.ಐ.ಸಿ ಪಾಲಿಸಿದಾರರ ಕುಟುಂಬಗಳಿಗೆ 11 ಕೋಟಿ ಹಣ ಪಾವತಿ ಮಾಡಿ ಎಲ್.ಐ.ಸಿ. ಕಂಪೆನಿ ಮಾನವೀಯತೆ ಮೆರೆದಿದೆ.
ಇತ್ತೀಚೆಗೆ ಕೇರಳ ರಾಜ್ಯದ ವಯನಾಡಿನಲ್ಲಿ ಅತಿವೃಷ್ಟಿಯಿಂದ ಭೂಕುಸಿತ ಉಂಟಾಗಿತ್ತು. ರಾತ್ರಿ ಬೆಳಗಾಗುವುದರಲ್ಲಿ ನೂರಾರು ಜನ ಮಣ್ಣಿನಡಿ ಸಿಲುಕಿ, ಕೊಚ್ಚಿ ಹೋಗಿ ಸಾವನ್ನಪ್ಪಿದ್ದರು. ಸಾವನ್ನಪ್ಪಿದವರ ಪೈಕಿ 36 ಜನ ಎಲ್.ಐ.ಸಿ. ಪಾಲಿಸಿದಾರರಿದ್ದರು. ಆದರೆ ಪಾಲಿಸಿಗೆ ಸಂಬಂಧಿಸಿದ ದಾಖಲೆಗಳು ದುರಂತದಿಂದಾಗಿ ಮಣ್ಣು ಮತ್ತು ನೀರಿನೊಂದಿಗೆ ಕೊಚ್ಚಿ ಹೋಗಿತ್ತು. ಇದನ್ನು ಗಮನಿಸಿದ ಎಲ್.ಐ.ಸಿ. ಕಂಪೆನಿ, ಯಾವುದೇ ದಾಖಲೆಗಳನ್ನು ಪಡೆಯದೇ ತನ್ನ ಪಾಲಿಸಿದಾರ ಕುಟುಂಬಗಳಿಗೆ ಮರಣ ದಾವೆ ರಖಂ 11 ಕೋಟಿ ಮೊತ್ತವನ್ನು ಪಾವತಿಸಿದೆ. ಎಲ್.ಐ.ಸಿ.ಯ ಈ ನಿರ್ಧಾರ ದೇಶದಾದ್ಯಂತ ಶ್ಲಾಘನೆಗೆ ಒಳಗಾಗಿದೆ. ಮಾತ್ರವಲ್ಲ ನೈಸರ್ಗಿಕ ಅವಘಡ ಗಳಲ್ಲಿ ಸಾಮಾಜಿಕ ಜವಾಬ್ದಾರಿಯನ್ನು ಅತ್ಯಂತ ಪ್ರಾಮಾಣಿಕವಾಗಿ ನಿರ್ವಹಿಸುವ ಏಕಮಾತ್ರ ವಿಮಾ ಸಂಸ್ಥೆ ಎನ್ನುವ ಪ್ರಶಂಸೆಗೆ ಪಾತ್ರವಾಗಿದೆ.