ಕುಂದಾಪುರ: ವಲಯ ಮಟ್ಟದ ಚೆಸ್ ಸ್ಪರ್ಧೆ, ಚದುರಂಗ ಮೆದುಳಿನ ಆಟ – ಪೌಲ್ ರೇಗೊ
ಕುಂದಾಪುರ: ಚೆಸ್ ಒಂದು ಮೆದುಳಿನ ಕೌಶಲ್ಯದ ಆಟ. ಆಟದಲ್ಲಿ ಸೋಲು ಎನ್ನುವುದು ಸೋಲಲ್ಲ. ಅದು ಗೆಲುವಿನ ಮೆಟ್ಟಿಲು ಎಂದು

ಸೈಂಟ್ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆ ಕುಂದಾಪುರ ಇದರ ಸಂಚಾಲಕ ವಂ. ಪೌಲ್ ರೇಗೊ ಹೇಳಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕುಂದಾಪುರ ಹಾಗೂ ಸೈಂಟ್ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆ ಕುಂದಾಪುರ ಇವರ ಆಶ್ರಯದಲ್ಲಿ ಸೈಂಟ್ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕುಂದಾಪುರ ವಲಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಬಾಲಕ ಬಾಲಕಿಯರ ಚೆಸ್ ಪಂದ್ಯಾಟದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರೋಟರಿ ಕ್ಲಬ್ ಕುಂದಾಪುರ ದಕ್ಷಿಣ ವಲಯದ ಅಧ್ಯಕ್ಷೆ ಜುಡಿತ್ ಮೆಂಡೋನ್ಸಾ ‘ಜೀವನದಲ್ಲಿ ಯಾವುದೇ ವಸ್ತುವನ್ನು ಪಡೆಯುವುದರಲ್ಲಿ ಸಂತೋಷಪಡದೆ ಅದನ್ನು ಕೊಡುವುದರಲ್ಲಿ ಸಂತೋಷಪಡಬೇಕು’ ಎಂದರು. ಕುಂದಾಪುರ ಪುರಸಭಾ ಸದಸ್ಯ ಪ್ರಭಾಕರ ಪಂದ್ಯಾಟ ಉದ್ಘಾಟಿಸಿದರು.

ದೈಹಿಕ ಪರಿವೀಕ್ಷಣಾಧಿಕಾರಿ ಸತ್ಯನಾರಾಯಣ. ಜಿ , ಯುವಜನ ಸೇವಾ ಕ್ರೀಡಾಧಿಕಾರಿ ಕುಸುಮಾಕರ್ ಶೆಟ್ಟಿ, ಕುಂದಾಪುರ ಸಮೂಹ ಸಂಪನ್ಮೂಲ ವ್ಯಕ್ತಿ ಸಂತೋಷ್ ಕುಮಾರ್ ಶೆಟ್ಟಿ, ತಾಲೂಕು ದೈಹಿಕ ಶಿಕ್ಷಣ ಶಿಕ್ಷಕ ಸಂಘದ ಕೋಶಾಧಿಕಾರಿ ಸಂಜೀವ ಮೊಗವೀರ, ಉಡುಪಿ ಜಿಲ್ಲಾ ಚೆಸ್ ಅಸೋಸಿಯೇಷನ್ ಅಧ್ಯಕ್ಷ ಬಾಬು ಪೂಜಾರಿ, ಸೌಂದರ್ಯ ಯು. ಕೆ. ಉಪಸ್ಥಿತರಿದ್ದರು.


ಮುಖ್ಯ ಶಿಕ್ಷಕಿ ಶಾಂತಿ ರಾಣಿ ಸ್ವಾಗತಿಸಿ, ಅನ್ನಿ ಕ್ರಾಸ್ತಾ ವಂದಿಸಿದರು. ಶಿಕ್ಷಕಿ ಶ್ರೀಮತಿ ನಿರೂಪಿಸಿದರು.