Crime newsBlogEducationGovernmentHighlightsLocal newsNational NewsOthersState newsTechTop StoriesTrendingWomen Care

ಕೋಟ: ಐಟಿ ಸೋಗಿನಲ್ಲಿ ಮನೆಗೆ ನುಗ್ಗಲೆತ್ನಿಸಿದ ತಂಡ : ಲೈವ್ ಸಿಸಿ ಸರ್ವೈವಲೆನ್ಸ್ ಸಂಸ್ಥೆಯಿಂದ ಬಚಾವಾದ ಮಹಿಳೆ

Aware others:

ಕುಂದಾಪುರ: ಬಾಲಿವುಡ್ ಸಿನೆಮಾ ಸ್ಪೆಷಲ್ 26 ನಲ್ಲಿ ತೋರಿಸುವ ಮಾದರಿಯಲ್ಲಿಯೇ ಐಟಿ ಅಧಿಕಾರಿಗಳ ಸೋಗಿನಲ್ಲಿ ಎರಡು ಕಾರಿನಲ್ಲಿ ಬಂದ ನಕಲಿ ಅಧಿಕಾರಿಗಳ ತಂಡವೊಂದು ಒಂಟಿ ಮಹಿಳೆಯಿದ್ದ ಮನೆಯೊಳಗೆ ನುಗ್ಗಲು ಯತ್ನಿಸಿ ವಿಫಲವಾದ ಘಟನೆ ಬ್ರಹ್ಮಾವರ ಪೊಲಿಸ್ ಠಾಣಾ ವ್ಯಾಪ್ತಿಯ ಕೋಟದ ಮಣೂರು ಎಂಬಲ್ಲಿ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ 66 ರ ಸಮೀಪದ ಸರ್ವೀಸ್ ರಸ್ತೆಗೆ ತಾಗಿಕೊಂಡೇ ಇರುವ ಇರುವ ಕವಿತ ಎನ್ನುವವರೇ ನಕಲಿ ಐಟಿ ಅಧಿಕಾರಿಗಳ ದಾಳಿಯಿಂದ ಪಾರಾದವರು. ಕವಿತಾ ಅವರು ಗುರುವಾರ ಬೆಳಿಗ್ಗೆ ಸುಮಾರು 8.30 ಸುಮಾರಿಗೆ ಮಕ್ಕಳನ್ನ ಶಾಲೆಗೆ ಬಿಟ್ಟು ಮನೆಗೆ ಮರಳಿದ ಕವಿತಾ ಅವರು ಬಾಗಿಲನ್ನ ಭದ್ರ ಪಡಿಸಿದ ಕೆಲವೇ ಕ್ಷಣದಲ್ಲಿ ಅವರ ಮನೆಗೆ ಎರಡು ಕಾರುಗಳಲ್ಲಿ ಐಟಿ ಅಧಿಕಾರಿಗಳ ಸೋಗಿನಲ್ಲಿ ಎಂಟು ಜನರ ತಂಡ ಆಗಮಿಸಿದೆ. DLC5S2939 ನಂಬರಿನ ಸ್ವಿಪ್ಟ್ ಕಾರು ಹಾಗೂ KA03NH4391 ನಂಬರಿನ ಇನ್ನೊವಾ ಕಾರಿನಲ್ಲಿ ಒಬ್ಬ ಪೊಲೀಸ್ ಸಿಬ್ಬಂದಿಯ ಉಡುಪಿನಲ್ಲಿದ್ದ. ಆದರೆ ಇದರ ಪರಿವೇ ಇಲ್ಲದ ಕವಿತಾ ತಮ್ಮಷ್ಟಕ್ಕೆ ತಾವು ಮನೆಯ ಕೆಲಸದಲ್ಲಿ ನಿರತರಾಗಿದ್ದರು. ಈ ಸಂದರ್ಭ ಆಗಂತುಕರ ತಂಡ ಮನೆಯ ಎದುರಿನ ಗೇಟನ್ನು ಬಲವಾಗಿ ತಳ್ಳಿ ಒಳಬರಲು ಯತ್ನಿಸಿದ್ದಾರೆ, ಈ ಎಲ್ಲಾ ಚಟುವಟಿಕೆಗಳನ್ನು ಮನೆಯ ಸುತ್ತ ಹಾಕಲಾಗಿರುವ ಸಿಸಿ ಕ್ಯಾಮೆರಾ ಲೈವ್ ಸರ್ವೇಲೆನ್ಸ್ ಸಂಸ್ಥೆ ಸೈನ್ ಇನ್ ಸೆಕ್ಯೂರಿಟಿ ಸಂಸ್ಥೆ ಆಗಂತುಕರ ಬಗ್ಗೆ ಕವಿತಾರಿಗೆ ದೂರವಾಣಿ ಮೂಲಕ ಸುಳಿವು ನೀಡಿ ಎಚ್ಚರಿಸಿ ಅನಾಹುತ ತಪ್ಪಿಸಿದೆ.

ವ್ಯವಹಾರಿಕವಾಗಿ ಉತ್ತಮ ಸ್ಥಿತಿಯಲ್ಲಿರುವ ಕವಿತಾ ಅವರ ಕುಟುಂಬ ತೆಕ್ಕಟ್ಟೆ ಪರಿಸರದಲ್ಲಿ ಸರ್ವಸಜ್ಜಿತ ಮನೆಯಲ್ಲಿ ವಾಸವಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಇವರ ಮನೆಯ ಮುಂದೆ ಇದೇ ತಂಡ ಸಾಕಷ್ಟು ಮಾಹಿತಿಯನ್ನು ಕಲೆ ಹಾಕಿತ್ತು ಎನ್ನಲಾಗಿದೆ. ಮನೆಯ ಸುತ್ತ ಇರುವ ಸಿಸಿ ಕ್ಯಾಮೆರಾ ಮತ್ತು ಭದ್ರತೆಯನ್ನು ಗಮನಿಸಿ ಐಟಿ ವೇಷದಾರಿಗಳ ರೂಪದಲ್ಲಿ ತಂಡ ಮನೆಗೆ ನುಗ್ಗುವ ಯತ್ನ ಮಾಡಿತ್ತು ಎನ್ನುವುದು ಪೊಲೀಸರ ಪ್ರಾಥಮಿಕ ಮಾಹಿತಿಯಲ್ಲಿ ತಿಳಿದು ಬಂದಿದೆ. ಸಿಖ್ ವೇಷಧಾರಿ ಹಲವು ಬಾರಿ ಗೇಟ್ ಬಡಿದಿದ್ದು, ಬಳಿಕ ಒಳಬರಲಾಗದೇ ಇದ್ದಾಗ ಉಳಿದವರನ್ನು ಕರೆದುಕೊಂಡು ಹೋಗಿ ಕಂಪೌಂಡ್ ಹಾರಿ ಒಳಬಂದು ಬಾಗಿಲು ಬಡಿದಿದ್ದಾರೆ. ಅದಾಗಲೇ ಮಾಹಿತಿ ಪಡೆದ ಕವಿತಾ ಬಾಗಿಲು ತೆಗೆಯದ ಹಿನ್ನೆಲೆಯಲ್ಲಿ ಮನೆಯ ಪಕ್ಕದ ಗೇಟ್ ಹತ್ತಿ ಕಾಂಪೌಂಡ್ ಒಳಗೆ ಹಾರಿ ಬಂದ ತಂಡ ಮನೆಯ ಸುತ್ತ ವೀಕ್ಷಿಸಿ ಮನೆಯ ಒಳ ಪ್ರವೇಶಿಸುವ ಪ್ರಯತ್ನ ಮಾಡಿತ್ತು. ಮನೆಯ ಗೇಟಿಗೂ ಹಾನಿಯಾಗಿದೆ ಎಂದು ಮನೆಯ ಯಜಮಾನಿ ಕವಿತಾ ಆರೋಪಿಸಿದ್ದಾರೆ.  ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಎರಡು ತಂಡಗಳನ್ನು ರಚಿಸಿ ತನಿಖೆ ಮಾಡುತ್ತಿದ್ದಾರೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಕರಾವಳಿಯಲ್ಲಿ ಆತಂಕ ಮನೆ ಮಾಡಿದ್ದು, ಒಬ್ಬರೇ ಇರುವ ಮನೆಯಲ್ಲಿ ವಾಸಮಾಡಲು ಹೆದರುವ ಸ್ಥಿತಿ ನಿರ್ಮಾಣವಾಗಿದೆ.


Aware others:

Leave a Reply

Your email address will not be published. Required fields are marked *

error: Content is protected !!