ಬೈಂದೂರು: ಎಚ್ಚರ.. ಸೌಪರ್ಣಿಕ ತೀರವಾಸಿಗಳೇ ಎಚ್ಚರ…
ಕುಂದಾಪುರ: ಕಳೆದೆರಡು ದಿನಗಳಿಂದ ಬೀಸುತ್ತಿರುವ ಭಿಕರ ಗಾಳಿ ಹಾಗೂ ಸುರಿಯುತ್ತಿರುವ ವಿಪರೀತ ಮಳೆಯಿಂದಾಗಿ ಸೌಪರ್ಣಿಲ ನದಿಯ ಜಲಮಟ್ಟ ಏರಿಕೆಯಾಗಿದ್ದು, ಸೌಪರ್ಷಿಕ ನದಿ ತೀರವಾಸಿಗಳು ಎಚ್ಚರವಹಿಸಬೇಕಾಗಿದೆ.
ಭಾರೀ ಮಳೆಯಿಂದಾಗಿ ರಾತ್ರಿ ನೆರೆ ಏರುವ ಸಂಭವ ಹೆಚ್ಚಿದೆ. ರಾತ್ರಿ ನೆರೆ ಏರಿದರೆ ಮನೆ ಬಿಡುವ ಪರಿಸ್ಥಿತಿಗಳು ಹೆಚ್ಚಿದ್ದು, ನದಿಯ ತೀರದ ಜನರು ಎಚ್ಚರ ವಹಿಸಬೇಕಾಗಿದೆ. ಜೊತೆಗೆ ಸಂಬಂಧಪಟ್ಟ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮವನ್ನು ತೆಗದುಕೊಳ್ಳುವುದರ ಜೊತೆಗೆ ಇಲ್ಲಿನ ಜನರಿಗೆ ಭದ್ರತೆ, ಸ್ಥಳಾಂತರ, ಪುನರ್ವಸತಿಯತ್ತ ಗಮನೆ ಹರಿಸಬೇಕಿದೆ
