BlogCrime newsGovernmentHealthHighlightsLocal newsNational NewsOthersSportsState newsTop StoriesTrendingWomen Care

ಕಾಮಾಂಧ ರಾಬರ್ಟ್ ನ ಇನ್ ಸೈಡ್ ಸ್ಟೋರಿ ರಿವೀಲ್!

Aware others:

ಡಾ. ರಾಬರ್ಟ್

ಉಡುಪಿ: ವಿವಾಹಿತ ವೈದ್ಯೆಗೆ ಲೈಂಗಿಕ ಕಿರುಕುಳ ನೀಡಿ, ಮಾನಸಿಕ ಹಿಂಸೆ ನೀಡಿ, ಬೆದರಿಕೆ ಹಾಕಿದ ಆರೋಪಿ ಡಾ. ರಾಬರ್ಟ್ ರೆಬೆಲ್ಲೋನ ಇನ್ಬಸೈಡ್ ಸೆಕ್ಸ್ ಸ್ಟೋರಿಗಳನ್ನು ತನಗೇ ಗೊತ್ತಿಲ್ಲದಂತೆ ಆತನೆ ರಿವೀಲ್ ಮಾಡಿಕೊಂಡಿದ್ದು, ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 

ಹೌದು, ತನಗೆ ಇಷ್ಟವಾದ ಯುವತಿಯರ ಜೊತೆಗೆ ತಿರುಗಾಡುತ್ತಿದ್ದ ಡಾ. ರೆಬೆಲ್ಲೋ‌ ಅಷ್ಟಕ್ಕೇ ಸುಮ್ಮನಿರದೇ ಇಂತಹಾ ಯುವತಿಯರೊಂದಿಗೆ ತೆಗೆಸಿಕೊಂಡಿರುವ ಫೋಟೋಗಳನ್ನು ತಾನೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಹೆಮ್ಮೆ ಪಡುತ್ತಿದ್ದ ಎನ್ನುವ ಅಂಶ ಬಯಲಾಗಿದೆ.

ತನಗೆ ಇಷ್ಟವಾದ ಯುವತಿಯರನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳಲು ಇಂತಹಾ ಫೋಟೋಗಳನ್ನು ವಾಟ್ಸಾಪ್ ಮೂಲಕ ಯುವತಿಯರಿಗೆ ಕಳುಹಿಸುತ್ತಿದ್ದ. ಅಷ್ಟಕ್ಕೇ ಸುಮ್ಮನಾಗದೇ “ನೀನು ಬಂದರೆ ನಿನ್ನನ್ನೂ ಕರೆದುಕೊಂಡು ಹೋಗುವೆ” ಎನ್ನುವ ಡಿಮ್ಯಾಂಡನ್ನೂ ಇಡುತ್ತಿದ್ದ. ಅಲ್ಲದೇ “ನಿನಗೆ ಬೇಕಾದಷ್ಟು ಸುಖ ಕೊಡುತ್ತೇನೆ” ಎನ್ನುವ ಭರವಸೆ ಬೇರೆ.

ಗಂಡನಿಗಿಂತ ಹೆಚ್ಚು ಸುಖ ಕೊಡುತ್ತಾನಂತೆ ಈ ಚಾಂಡಾಲ! “ನನಗೆ ಪವರ್ ಬೇರೆ ಇದೆ. ನನ್ನನ್ನು ಯಾರೂ ಏನೂ ಮಾಡುವುದಕ್ಕಾಗುವುದಿಲ್ಲ” ಎನ್ನುವ ಧಿಮಾಕು ಬೇರೆ! ಯಾರಾದರೂ ಈ ವೈದ್ಯನ ಮೆಸೇಜುಗಳಿಗೆ ಆರಂಭದಲ್ಲಿ ಸ್ಪಂದಿಸಿದರಂತೂ ಮುಗಿತು. ರಾತ್ರಿ ಎಣ್ಣೆ ಏರಿಸಿಕೊಂಡು ವೀಡಿಯೋ ಕಾಲ್ ಮೂಲಕ ಬಾತ್ ರೂಂ, ಬೆಡ್ ರೂಮಿಗೂ ಬಂದು ಬಿಡುತ್ತಾನಂತೆ. 

ಯಾರೀ ರಾಬರ್ಟ್? 

ಡಾ. ರಾಬರ್ಟ್. ಹೆಸರು ಕೇಳಿದರೆ ಕುಂದಾಪುರ ಜನರು ಸ್ವಲ್ಪ ಹೊತ್ತು ಸ್ಟನ್ ಆಗುತ್ತಾರೆ. ಒಂದು ಕಾಲದಲ್ಲಿ ಕುಂದಾಪುರದ ಫವರ್ಫುಲ್ ಪೊಲಿಟೀಷಿಯನ್ ಅಗಿದ್ದವರ ಅಳಿಯನೇ ಈ ರಾಬರ್ಟ್. ರಾಬರ್ಟ್ ಅತ್ತೆಯ ಫವರ್ ನಿಂದಲೇ ಕುಂದಾಪುರ ಸರ್ಕಾರೀ ಆಸ್ಪತ್ರೆಯಲ್ಲಿ ಪವಡಿಸಿದ ರಾಬರ್ಟ್, ಅಲ್ಲಿಂದ ಏಳಲೇ ಇಲ್ಲ. ಈ ಹಿಂದೆ ನಡೆದ ಘಟನೆಯೊಂದರಲ್ಲಿ ತಗಲಾಕ್ಕೊಂಡಿದ್ದ ರಾಬರ್ಟ್, ಮತ್ತೆ ತನ್ನ ಫವರ್ ಬಳಸಿ ಅದೇ ಆಸ್ಪತ್ರೆಗೆ ಬಂದಿದ್ದ.

ಸರ್ಕಾರೀ ಆಸ್ಪತ್ರೆಯ ವೈದ್ಯಾಧಿಕಾರಿಯಾಗಿ ಈತ ಮಾಡಿದ್ದು ಡಿವೈಡ್ ಎಂಡ್ ರೂಲ್. ರೋಗಿಗಳ ಬಗ್ಗೆ ನಿರ್ಲಕ್ಷ್ಯ, ತನ್ನ ನಡವಳಿಕೆ ವಿರುದ್ಧ ಮಾತಾಡುತ್ತಿದ್ದವರ ವಿರುದ್ದ ಸಮರ, ಸುಂದರ ಮುಖದ ಹೆಣ್ಮಕ್ಕಳನ್ನು ಬಲೆಗೆ ಹಾಕಿಕೊಳ್ಳುವುದು ಇದೇ ಈತನ ಕಾಯಕ ಎನ್ನುವುದನ್ನು ಆಸ್ಪತ್ರೆಯ ಗೋಡೆಗಳು ಸಾರಿ ಹೇಳುತ್ತಿವೆ. ದುರಸ್ತಿ ಕಾಣದ, ಮಳೆಗಾಲದಲ್ಲಿ ಸುರಿಯುತ್ತಿರುವ ಆಸ್ಪತ್ರೆ ರಾಬರ್ಟ್ ಸಾಧನೆಗೆ ಕನ್ನಡಿಯಾಗಿವೆ. ಯಾರನ್ನೇ ಕೇಳಿದ್ರೂ “ಅವನನ್ನೊಮ್ಮೆ ಕಳಿಸಿ ಮಾರ್ರೆ” ಎನ್ನುವ ಮಾತು ಕುಂದಾಪುರದಲ್ಲಿ ಸಾಮಾನ್ಯವಾಗಿದೆ.

ಅದೇನೇ ಇರಲಿ, ಪ್ರಕರಣ ದಾಖಲಾಗುತ್ತಿದ್ದಂತೆ ಈತನ ಒಂದೊಂದೇ ಪ್ರಕರಣಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲಾರಂಭಿಸಿವೆ. ಕಾನೂನು, ಅಧಿಕಾರಿಗಳು ಏನು ಮಾಡುತ್ತಾರೋ ಗೊತ್ತಿಲ್ಲ. ಆದರೆ ಕಾಮಾಂಧ ವೈದ್ಯನಿಗೆ ಮಾತ್ರ ಸರಿಯಾದ ಶಿಕ್ಷೆಯಾಗಬೇಕು ಎನ್ನುವುದು ಸಾರ್ವಜನಿಕರ ಮತ್ತು ಸಂತ್ರಸ್ಥರ ಆಗ್ರಹ


Aware others:

Leave a Reply

Your email address will not be published. Required fields are marked *

error: Content is protected !!