ಕುಂದಾಪುರ: ಕೆನರಾ ಬ್ಯಾಂಕ್ ಮುಖ್ಯ ಪ್ರಬಂಧಕಿ ಭಾರತಿ ವರ್ಗಾವಣೆ.








ಕುಂದಾಪುರ: ಒಂದು ವರ್ಷದಿಂದ ಕೆನರಾ ಬ್ಯಂಕಿನ ಕುಂದಾಪುರದ ಮುಖ್ಯ ಕಚೇರಿಯಲ್ಲಿ ಮುಖ್ಯ ಪ್ರಬಂಧಕಿಯಾಗಿ ಸೇವೆ ಸಲ್ಲಿಸಿ ಕಾರವಾರ ಮುಖ್ಯ ಕಚೇರಿಗೆ ವರ್ಗಾವಣೆಯಾಗುತ್ತಿರುವ ಬಾರತಿ ಅವರಿಗೆ ಹಾರ್ದಿಕವಾಗಿ ಬೀಳ್ಕೊಡಲಾಯಿತು.
ಬುಧವಾರ ಸಂಜೆ ಬ್ಯಾಂಕಿನಲ್ಲಿ ನಡೆದ ಔಪಚಾರಿಕ ಕಾರ್ಯಕ್ರಮದಲ್ಲಿ ಬ್ಯಾಂಕಿನ ಎಲ್ಲಾ ಸಿಬ್ಬಂದಿಗಳ ಸಹಕಾರ ಸ್ಮರಿಸಿದರು. ಇದೇ ಸಂದರ್ಭ ಸಿಬ್ಬಂದಿಗಳು ಶಾಲು ಹೊದೆಸಿ ಸನ್ಮಾನಿಸಿ ಗೌರವಿಸಿದರು. ಬ್ಯಾಂಕಿನ ಸೀನಿಯರ್ ಮ್ಯಾನೇಜರ್ ಗ್ಯಾನೇಶ್ ಅವರು ಸ್ಮರಣಿಕೆ ನೀಡಿ ಗೌರವಿಸಿದರು.
ಬ್ಯಾಂಕಿನ ನೂತನ ಮುಖ್ಯ ಪ್ರಬಂಧಕರಾಗಿ ಕುಮಾರ್ ಶಾಂತನು ಅವರು ನಾಳೆ ಗುರುವಾರ ಅಧಿಕಾರ ಸ್ವೀಕರಿಸಲಿದ್ದಾರೆ.
