BlogHighlightsLocal newsNational NewsOthersPoliticsState newsTrending

ಕುಂದಾಪುರ: ಕಾಂಗ್ರೆಸ್ಸಿನ ನೆಗೆಟಿವ್ ಪಾಲಿಟಿಕ್ಸ್ ಗೆ ಜನ ಉತ್ತರಿಸುತ್ತಾರೆ – ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Aware others:

ಕುಂದಾಪುರ: ಕಾಂಗ್ರೆಸ್ಸಿಗರು ಕರ್ನಾಟಕದಲ್ಲಿ ನೆಗೆಟಿವ್ ಪಾಲಿಟಿಕ್ಸ್ ತಗೊಂಡು ಬಂದಿದ್ದಾರೆ. ಕರ್ನಾಟಕದ ಜನ ಇದನ್ನು ಕಂಪ್ಲೀಟ್ ಆಗಿ ರಿಜೆಕ್ಟ್ ಮಾಡ್ತಾರೆ ಎಂದು ಉಡುಪಿ ಜಿಲ್ಲೆಯ ಮಾಜಿ ಎಸ್ ಪಿ ಪ್ರಸ್ತುತ ತಮಿಳುನಾಡು ಬಿಜೆಪಿಯ ಅಧ್ಯಕ್ಷ ಕೆ ಅಣ್ಣಾಮಲೈ ಹೇಳಿದ್ದಾರೆ. ಅವರು ಕುಂದಾಪುರದಲ್ಲಿ ನಡೆದ ಬೃಹತ್ ಬೈಕ್ ರೋಡ್ ಶೋ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಮೋದಿಜೀಯವರಿಗೆ ಕರ್ನಾಟಕ ಎಂದರೆ ಬಹಳ ಪ್ರೀತಿ. ಹಾಗಾಗಿ ಕರ್ನಾಟಕದ ಜನ ಮೋದಿಜಿ ಅವರಿಗೆ ಕಣ್ಮುಚ್ಚಿಕೊಂಡು ಮತ ಹಾಕ್ತಾರೆ. ಜೂನ್ 4ನೇ ತಾರೀಕು ಫಲಿತಾಂಶ ಹೊರ ಬಿದ್ದ ಮೇಲೆ ಕಾಂಗ್ರೆಸ್ನವರು ಮುಖವನ್ನು ಹೇಗೆ ತೋರಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ ಎಂದರು.

ತಮಿಳುನಾಡಿನಲ್ಲಿ ಬಿಜೆಪಿಯ ಪರಿಸ್ಥಿತಿಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಅಲಯನ್ಸ್  ತುಂಬಾ ಸ್ಟ್ರಾಂಗ್ ಆಗಿದೆ. ಮಾಜಿ ಮುಖ್ಯಮಂತ್ರಿ ಪನ್ನೀರ್ ಸಲ್ವಂ, ದಿನಕರ್, ಷಣ್ಮುಗಂ, ಮೊದಲಾದವರು ನಮ್ಮ ಜೊತೆ ಇದ್ದಾರೆ. ಹಾಗಾಗಿ ತಮಿಳುನಾಡಿನಲ್ಲಿ ಈ ಬಾರಿ ಬಿಜೆಪಿ ಜಯಭೇರಿ ಬಾರಿಸಲಿದೆ. 39 ಕ್ಷೇತ್ರಗಳ ಪೈಕಿ 27 ಕ್ಷೇತ್ರಗಳಲ್ಲಿ ಬಿಜೆಪಿ ಈ ಬಾರಿ ಕಂಟೆಸ್ಟ್ ಮಾಡಿದೆ. ಖಂಡಿತವಾಗಿಯೂ ತಮಿಳುನಾಡಿನಲ್ಲಿ  ಈ ಬಾರಿ ಡಬಲ್ ಡಿಜಿಟ್ ನಲ್ಲಿ ಗೆಲುವು ಸಾಧಿಸುವ ನಂಬಿಕೆಯಿದೆ ಎಂದು ಹೇಳಿದರು. 

ತಮಿಳುನಾಡು ಬಿಜೆಪಿ ಮುಖಂಡ ಮಾಧ್ಯಮದಬಜೊತೆ ನೀಡಿದ ಸಂದರ್ಶನದ ವಿಡಿಯೋ

ನೇಹಾ ಹತ್ಯೆಯ ಬಗ್ಗೆ ಮಾತನಾಡಿ, ನಾವೆಲ್ಲರೂ ನೋಡ್ತಾ ಇದ್ದೇವೆ, ಕಾಲೇಜಿಗೆ ಹೋಗುತ್ತಿರುವ ಹುಡುಗಿ ಏನು ತಪ್ಪು ಮಾಡಿಲ್ಲ. ಒಬ್ಬ ಮುಸ್ಲಿಂ ಯುವಕ ಅವಳಿಗೆ ಪ್ರಪೋಸ್ ಮಾಡುತ್ತಾನೆ ಆದರೆ ಒಪ್ಪೋದಿಲ್ಲ. ಕೈನಲ್ಲಿ ಪವರ್ ಇದೆ ವೈಲೆನ್ಸ್ ಇದೆ. ಆದರೆ ಒಂದು ಹುಡುಗಿಗೆ ಫ್ರೀಡಂ ಅಪ್ ಚಾಯ್ಸ್ ಮಾಡಲು ಕೂಡ ಅವಕಾಶ ಕೊಡ್ತಾ ಇಲ್ಲ. ಆತ ಯಾವ ತರ ಚಾಕುವಿನಲ್ಲಿ ಇರಿದಿದ್ದಾನೆ ಎನ್ನುವುದನ್ನು ನಾವು ಟಿವಿಯಲ್ಲಿ ನೋಡಿದ್ದೇವೆ. ಈ ಘಟನೆ ನಡೆದ ಎರಡು ದಿನಗಳ ನಂತರ ಕಾಂಗ್ರೆಸ್ಸು ಸರ್ಕಾರದ ಹೋಂ ಮಿನಿಸ್ಟರ್ ಪರಮೇಶ್ವರವರು ಏನು ಮಾತನಾಡಿದರು ಎನ್ನುವುದನ್ನು ನಾವು ಕೇಳಿದ್ದೇವೆ ಈ ಮಧ್ಯೆ ಆ ಹುಡುಗಿಯ ತಂದೆ ಹುಬ್ಬಳ್ಳಿಯ ಪುರಸಭೆಯ ಕಾಂಗ್ರೆಸ್ ಕೌನ್ಸಿಲರ್ ಆಗಿದ್ದರೂ ಅವರ ರಕ್ಷಣೆಗೆ ನಿಲ್ಲದೆ ಅಲ್ಪಸಂಖ್ಯಾತರ ಓಲೈಕೆಗೆ ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಜನ ಎಲ್ಲದನ್ನು ಗಮನಿಸ್ತಾ ಇದ್ದಾರೆ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯ ಅಷ್ಟೇ ಸಂಪೂರ್ಣ ಹದಗೆಟ್ಟಿದೆ. ಎಲ್ಲವೂ ಕರ್ನಾಟಕದಲ್ಲಿ ಕಾಂಗ್ರೆಸ್ ಬಂದ ನಂತರ ಜಾಸ್ತಿ ಆಗ್ತಾ ಇದೆ. ಹಂಡ್ರೆಡ್ ಪರ್ಸೆಂಟ್ ಎಪ್ರಿಲ್ 26 ಹಾಗೂ ಮೇ 7ರ ಎರಡು ಚುನಾವಣೆಗಳಲ್ಲಿ ಮತದಾರರು ತಕ್ಕ ಪಾಠ ಕಲಿಸುತ್ತಾರೆ ಎಂದರು.

ಕಾಂಗ್ರೆಸ್ ಪಕ್ಷಕ್ಕೆ ಸೋಲು ಕಟ್ಟಿಟ್ಟ ಬುತ್ತಿ ಎನ್ನುವುದು ಕಾಂಗ್ರೆಸ್ ಪಕ್ಷಕ್ಕೆ ಅರಿವಾಗಿದೆ. ಅದಾದ ಮೇಲೆ ಕೇರಳದಲ್ಲಿ ವಿಜಯನ್ ಅವರು ಹೇಳುತ್ತಿದ್ದಾರೆ ರಾಹುಲ್ ಗಾಂಧಿಯನ್ನು ಅರೆಸ್ಟ್ ಮಾಡಿ ಅಂತ. ರಾಹುಲ್ ಗಾಂಧಿ ಹೇಳ್ತಾರೆ ಪೀಣರಾಯಿ ವಿಜಯನವರನ್ನು ಅರೆಸ್ಟ್ ಮಾಡಿ ಅಂತ. ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿ ಹೇಳ್ತಾರೆ ಉದಯ ನಿಧಿ ಅವರನ್ನು ಅರೆಸ್ಟ್ ಮಾಡಿ ಅಂತ. ಈಗ ಅವರೊಳಗೆ ಜಗಳ ಆಗ್ತಾ ಇದೆ. ಕರ್ನಾಟಕದಲ್ಲಿ ವ್ಯತಿರಿಕ್ತ ವಾತಾವರಣ ಇದೆ. ದೇವೇಗೌಡರು ಚೊಂಬಲ್ಲಾ ಅಕ್ಷಯಪಾತ್ರೆ ಎಂದಾಗ ಕಾಂಗ್ರೆಸ್ ಅವರ ಮೇಲೆ ಅಟ್ಯಾಕ್ ಮಾಡ್ಲಿಕ್ಕೆ ಪ್ರಾರಂಭ ಮಾಡ್ತಾರೆ ಎಂದರು.


Aware others:

Leave a Reply

Your email address will not be published. Required fields are marked *

error: Content is protected !!