ಅರೆಹೊಳೆ ಬೈಪಾಸ್ನಲ್ಲಿ ಕಾರಿಗೆ ಟಿಪ್ಪರ್ ಡಿಕ್ಕಿ : 5 ಜನ ಗಂಭೀರ, 1 ಸಣ್ಣ ಪುಟ್ಟ ಗಾಯಗಳಿಂದ ಪಾರು

ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಭಾನುವಾರ ಮಧ್ಯಾಹ್ನ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಆರು ಜನ ಎಸ್ಬಿಐ ಉದ್ಯೋಗಿಗಳು ಗಂಭೀರ ಗಾಯಗೊಂಡ ಘಟನೆ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಾಗೂರು ಸಮೀಪದ ಅರೆ ಹೊಳೆ ಬೈಪಾಸ್ ಎಂಬಲ್ಲಿ ಕಾರು ಮತ್ತು ಲಾರಿಗಳ ನಡುವೆ ಅಪಘಾತ ಸಂಭವಿಸಿದ್ದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿನ ಉದ್ಯೋಗಿಗಳು ಗಾಯಗೊಂಡವರು. ಬ್ಯಾಂಕ್ ಉದ್ಯೋಗ ಮಾಡುತ್ತಿರುವ ಪ್ರತಾಪ್ ಪ್ರೇಮ್ ಪ್ರಜ್ವಲ್ ಅಂತೋನಿ ಸುರೇಶ್ ಹಾಗೂ ಹಟ್ಟಿಕುದ್ರು ನಿವಾಸಿ ವಿಘ್ನೇಶ್ ಗಾಯಗೊಂಡವರು.

ಕಾರಿನಲ್ಲಿದ್ದವರು ಶನಿವಾರ ಸಂಜೆ ತಮ್ಮ ಸ್ನೇಹಿತನಾದ ಹಟ್ಟಿಕುದ್ರು ವಿಘ್ನೇಶ್ ಮನೆಯಲ್ಲಿ ಬಂದು ಉಳಿದುಕೊಂಡಿದ್ದು ಇಂದು ಮಧ್ಯಾಹ್ನ ಗೋಕರ್ಣ ದೇವಸ್ಥಾನಕ್ಕೆಹೊರಟಿದ್ದರು. ಸಂಜೆ ಸುಮಾರು 3 45ರ ಸುಮಾರಿಗೆ ನಾಗೂರು ಸಮೀಪದ ಅರೆಹೊಳೆ ಬೈಪಾಸ್ ಎಂಬಲ್ಲಿ ತಲುಪಿದಾಗ ಮಣ್ಣುಬಸಾಗಾಟದ ಟಿಪ್ಪರ್ ಲಾರಿ ಡಿಕ್ಕಿಯಾಗಿದೆ.

ಅಪಘಾತದ ತೀವ್ರತೆಗೆ ಕಾಲಿನಲ್ಲಿದ್ದ ಆರು ಜನರ ಪೈಕಿ ಐವರು ಗಂಭೀರ ಗಾಯಗೊಂಡಿದ್ದಾರೆ. ಪ್ರಜ್ವಲ್ ಹಾಗೂ ಅಂಥೋನಿ ಅವರನ್ನು ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರತಾಪ್ ಮತ್ತು ಪ್ರೇಮ್ ಎಂಬುವರನ್ನು ಕುಂದಾಪುರ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಆಂಧ್ರ ಪ್ರದೇಶ ಮೂಲದ ಸುರೇಶ್ ಎಂಬಾತನನ್ನ ಮತ್ತು ಹಟ್ಟಿ ಕುದುರಿ ನಿವಾಸಿ ವಿಜ್ಞೇಶ್ ಎಂಬುವರನ್ನು ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಚಿಕ್ಕಮಗಳೂರಿನ ಸುತ್ತಮುತ್ತಲಿನ ಎಸ್ಬಿಐ ಬ್ಯಾಂಕುಗಳಲ್ಲಿ ಕೆಲಸ ಮಾಡುತ್ತಿದ್ದ ಆರು ಜನ ಸ್ನೇಹಿತ ವಿಘ್ನೇಶನ ಮನೆಯಲ್ಲಿ ಬಂದು ಉಳಿದು ಭಾನುವಾರ ತಿರುಗಾಟಕ್ಕೆಂದು ತೆರಳಿದ್ದರು. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಕಿರಿಮಂಜೇಶ್ವರದ 108 ಆಂಬುಲೆನ್ಸ್ ಹಾಗೂ ಗಂಗೊಳ್ಳಿಯ ಎಂ ಎಚ್ ಐ ಅಂಬುಲೆನ್ಸ್ ಸಹಕರಿಸಿದರೆ ಮೊಹಮ್ಮದ್ ಅಬ್ರರ್ ಹಾಗೂ ನಾಗೂರಿನ ನತಾರ್ ಎಂಬುವರು ಸಹಕರಿಸಿದರು. ಭಾನುವಾರದ ಜನನಿ ಬಿಡ ಸಂಚಾರದ ನಡುವೆಯೂ ಸ್ಥಳೀಯರ ಸಹಕಾರದಿಂದ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಅನುಕೂಲ ಕಲ್ಪಿಸಲಾಗಿತ್ತು. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ