BlogEconomyEducationEntertainmentFashionGovernmentHighlightsHuman storiesLifestyleLocal newsOthersState newsSuccess storiesTop StoriesTrendingWomen Care

ರಾಜ್ಯಕ್ಕೆ ಪ್ರಥಮ ರಾಂಕ್ – ಸಾಧಕಿ ಸಾಯಿಸ್ಪರ್ಷಳಿಗೆ ಶಿಕ್ಷಣಾಧಿಕಾರಿ ಸನ್ಮಾನ

Aware others:

ಕುಂದಾಪುರ: 2024 -25 ನೇ ಸಾಲಿನ ಎಸ್ .ಎಸ್. ಎಲ್ .ಸಿ .ಮುಖ್ಯ ಪರೀಕ್ಷೆಯಲ್ಲಿ  ಮರು ಮೌಲ್ಯಮಾಪನದಲ್ಲಿ 625 ರಲ್ಲಿ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಕುಂದಾಪುರ ಎಜ್ಯುಕೇಶನ್ ಟ್ರಸ್ಟ್ ನ ವಿಕೆಆರ್ ಆಂಗ್ಲಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ,  ಕುಂದಾಪುರದ ಖಾರ್ವಿಕೇರಿ ನಿವಾಸಿಗಳಾದ ದೇವದಾಸ್ ಮತ್ತು  ಶಶಿಕಲಾ ದಂಪತಿಗಳ ಪುತ್ರಿಯಾದ ಸಾಯಿಸ್ಪರ್ಷ ಅವರನ್ನು ಅವರ ಮನೆಯಲ್ಲಿ ಕುಂದಾಪುರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ್ ಶೆಟ್ಟಿಯವರು  ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭ ಮಾತನಾಡಿದ ಶಿಕ್ಷಣಾಧಿಕಾರಿ ಚಂದ್ರಶೇಖರ್ ಶೆಟ್ಟಿ, ಸಾಯಿಸ್ಪರ್ಷಳು ರಾಜ್ಯಕ್ಕೆ ಪ್ರಥಮ ರಾಂಕ್ ಗಳಿಸಿದ್ದು ಕುಂದಾಪುರ ವಲಯಕ್ಕೆ, ಉಡುಪಿ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ‌. ಅವಳ ಮುಂದಿನ ಶೈಕ್ಷಣಿಕ ಭವಿಷ್ಯ ಉತ್ತಮವಾಗಿರಲೆಂದು ಹಾರೈಸಿ, ಪೋಷಕರಿಗೆ, ವಿ.ಕೆ.ಆರ್.ಆಂಗ್ಲ ಮಾಧ್ಯಮ ಶಾಲೆಗೆ ಧನ್ಯವಾದ ತಿಳಿಸಿದರು. ಕುಂದಾಪುರ ವಲಯದ ಎಸ್.ಎಸ್.ಎಲ್.ಸಿ. ನೋಡಲ್  ಶೇಖರ್ ಪಡುಕೋಣೆ ಉಪಸ್ಥಿತಿಯಲ್ಲಿದ್ದರು.


Aware others:

Leave a Reply

Your email address will not be published. Required fields are marked *

error: Content is protected !!