ಕುಂದಾಪುರ: ಎಸ್.ಎಸ್.ಎಲ್.ಸಿ. ಫಲಿತಾಂಶ ವಿದ್ಯಾರಣ್ಯ ಶಾಲೆಗೆ 6 ರ್ಯಾಂಕ್
ಕುಂದಾಪುರ: ಕರ್ನಾಟಕ ಶಿಕ್ಷಣ ಇಲಾಖೆ ಪ್ರಕಟಿಸಿದ ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶ 2025 ರಲ್ಲಿ ಕುಂದಾಪುರದ ಯಡಾಡಿ-ಮತ್ಯಾಡಿಯ ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ನ ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ 10ರೊಳಗಿನ 6 ರ್ಯಾಂಕ್ ಗಳನ್ನು ಗೆದ್ದು ಸಾಧನೆ ಮೆರೆದಿದ್ದಾರೆ.






ಸಂಸ್ಥೆಯ ವಿದ್ಯಾರ್ಥಿನಿ ಪ್ರಾವ್ಯ ಪಿ. ಶೆಟ್ಟಿ 625ಕ್ಕೆ 623 ಅಂಕಗಳಿಸುವುದರ ಮೂಲಕ ರಾಜ್ಯಕ್ಕೆ 3ನೇ ರ್ಯಾಂಕ್ ಪಡೆದಿದ್ದಾಳೆ. ಸಂಸ್ಥೆಯ ವಿದ್ಯಾರ್ಥಿ ಆಯುಷ್ ಯು ಶೆಟ್ಟಿ 622 ಅಂಕ ಗಳಿಸಿ 4ನೇ ರ್ಯಾಂಕ್ , ಅನುಶ್ರೀ 620 ಅಂಕ ಗಳಿಸಿ 6ನೇ ರ್ಯಾಂಕ್, ಅಪೇಕ್ಷಾ ಶೆಟ್ಟಿ 619 ಅಂಕ ಪಡೆದು 7ನೇ ರ್ಯಾಂಕ್ ಪಡೆದಿದ್ದಾಳೆ. ಸುಖಿ ಎಸ್. ಶೆಟ್ಟಿ 625 ಕ್ಕೆ 618 ಅಂಕಗಳಿಸುವುದರ ಮೂಲಕ 8ನೇ ರ್ಯಾಂಕ್ ಪಡೆದಿದ್ದಾಳೆ. ದರ್ಶನ್ ಕೆ.ಯು. 625 ಕ್ಕೆ 616 ಅಂಕ ಪಡೆಯುವುದರ ಮೂಲಕ 10ನೇ ರ್ಯಾಂಕ್ ಪಡೆದಿದ್ದಾರೆ.
































ರೀಮಾ ಪ್ರಕಾಶ್ ಶೆಟ್ಟಿ 615, ಎಸ್.ಆರ್. ರಿತೇಶ 615, ಅಭಿಲಾಷ್ 613, ಆದಿತ್ಯ ಬಸವರಾಜ್ 613, ಕನ್ನಿಕ 613, ವೈಷ್ಣವಿ 606, ನಯನ ಕೆ 604, ರಜತಕುಮಾರ್ ಶೆಟ್ಟಿ 604, ಮೇದಿತ್ ಶೆಟ್ಟಿ 602, ಅವಿನಾಶ್ ಉಡುಪ 599, ಸನ್ವಿತ್ ಎಸ್. ಶೆಟ್ಟಿ 599, ಆಶಿಕ್ ಯುಕೆ 597, ಋತು ರಾಜಶೇಖರ್ 596, ಅಂಕಿತ ಕೆದ್ಲಾಯ 594 , ಶ್ರೀಶ 594, ಶನಾಯ 593, ಸ್ಪಂದನ 591, ಸೃಷ್ಟಿ 591, ಮಿಶಾ ಶೆಟ್ಟಿ 589, ಶಶಾಂಕ್ 588, ತನ್ಮಯ್ 588, ಆಕಾಂಕ್ಷ 587, ನಚಿಕೇತ್ 587, ಪ್ರೇಕ್ಷಾ 587, ರಿತ್ವಿಜ್ 585, ವಿಕಾಸ್ ಜೆ.ಕೆ. 584, ಆರ್ಯನ್ 583, ಪಾರ್ಥಸಾರಥಿ 582, ಸುವಾನ್ 581, ರೋಹನ್ 580, ಶ್ರೇಯಾ ಬಿ 580, ತನ್ಮಯ್ ಜೆ. ರಾವ್ 580 ಅಂಕಗಳನ್ನು ಪಡೆದಿದ್ದಾರೆ. ಪರೀಕ್ಷೆ ಬರೆದ 107 ವಿದ್ಯಾರ್ಥಿಗಳಲ್ಲಿ 15 ವಿದ್ಯಾರ್ಥಿಗಳು 600ಕ್ಕೂ ಅಧಿಕ ಅಂಕ, 21 ವಿದ್ಯಾರ್ಥಿಗಳು 95%ಕ್ಕಿಂತ ಅಧಿಕ ಅಂಕ ಪಡೆದರೆ ,62 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಅಂಕ ಪಡೆದಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಶಾಲೆಯ ಆಡಳಿತ ಮಂಡಳಿ,ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗ ಮತ್ತು ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ನ ಅಧ್ಯಕ್ಷರಾದ ಡಾ. ರಮೇಶ್ ಶೆಟ್ಟಿ, ಕಾರ್ಯದರ್ಶಿ ಪ್ರತಾಪಚಂದ್ರ ಶೆಟ್ಟಿ ಹಾಗೂ ಖಜಾಂಚಿ ಭರತ್ ಶೆಟ್ಟಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ.