BlogEconomyEducationGovernmentHighlightsLifestyleLocal newsOthersState newsSuccess storiesTop StoriesTrending

ಕೊಂಕಣ ರೈಲ್ವೇ ಬೇಡಿಕೆಗಳ ಬಗ್ಗೆ ಗಣೇಶ್ ಪುತ್ರನ್ ಚರ್ಚೆ – ಅಧಿಕಾರಿಗಳಿಂದ ಸ್ಪಂದನೆ

Aware others:

ಕುಂದಾಪುರ: ಕರ್ನಾಟಕದ ಕೊಂಕಣ ರೈಲ್ವೆ ಭಾಗದಲ್ಲಿ ರೈಲುಗಳಿಗೆ ನೀರು ತುಂಬುವ ವ್ಯವಸ್ಥೆ, ರೈಲುಗಳನ್ನು ಪಾರ್ಕ್ ಮಾಡುವ ವ್ಯವಸ್ಥೆ, ಉಡುಪಿ ರೈಲು ನಿಲ್ದಾಣಕ್ಕೆ ದುರಂತೋ  ಮತ್ತು ಹಮ್ ಸಪರ್ ರೈಲುಗಳ ನಿಲುಗಡೆ, ಮಂಗಳೂರು ಬೆಂಗಳೂರು ಘಾಟ್ ಮಾರ್ಗದ ಕ್ರಾಸಿಂಗ್ ವ್ಯವಸ್ಥೆಯ ಸುಧಾರಣೆ ಮಾಡಲು ನೈರುತ್ಯ ರೈಲ್ವೆ ಜತೆ ಸಂವಹನ ಸೇರಿದಂತೆ ಕರಾವಳಿಯ ಭವಿಷ್ಯದ ರೈಲು ಕಲ್ಪನೆ ಸೇರಿದಂತೆ ಹಲವು ಅಭಿವೃದ್ಧಿ ಪರ ಸಲಹೆಗಳನ್ನು ಕೊಂಕಣ ರೈಲ್ವೆ ಬಳಕೆದಾರರ ಸಲಹಾ ಸಮಿತಿಯ ಸಭೆಯಲ್ಲಿ ಕೊಂಕಣ ರೈಲ್ವೆ ಸಲಹಾ ಸಮಿತಿಯ ಸದಸ್ಯ ಗಣೇಶ್ ಪುತ್ರನ್ ಚರ್ಚಿಸಿದರು

ಕೊಂಕಣ ರೈಲ್ವೆ ವಿಲೀನವಾಗದೇ ಅದಕ್ಕೆ ಬಜೆಟ್ ಅನುದಾನ ಬರುವುದಿಲ್ಲ, ಬಜೆಟ್ ಅನುದಾನ ಇಲ್ಲದ ಕಾರಣ ಡಬ್ಲಿಂಗ್ ಮಾಡಲಾಗುತ್ತಿಲ್ಲ. ದೇಶಾದ್ಯಂತ ದಟ್ಟಣೆಯ ಕಾರಣದಿಂದ ಮಾರ್ಗಗಳು ಡಬಲ್ ಆಗುತಿದ್ದು ಹೊಸ ಹೊಸ ಅತೀ ವೇಗದ ರೈಲುಗಳು ಆರಂಭವಾಗುತ್ತಿದ್ದು, ಕೊಂಕಣ ಮಾರ್ಗದ ಪ್ರಯಾಣಿಕರು ನಿಗಮ ಮತ್ತು ಭಾರತೀಯ ರೈಲ್ವೇ ಗೊಂದಲದ ನಡುವೆ ಅಭಿವೃದ್ದಿಯಿಂದ ವಂಚಿತರಾಗಿದ್ದು , ಈ ಬಗ್ಗೆ ಸಾರ್ವಜನಿಕರಿಗಾಗುತ್ತಿರುವ ಸಮಸ್ಯೆಗಳನ್ನು ಗಮನಿಸಿ ತಕ್ಷಣವೇ ಡಬ್ಲಿಂಗ್ ಮಾಡಲು ಕ್ರಮ ಕೈಗೊಳ್ಳುವಂತೆ ಗಣೇಶ್ ಪುತ್ರನ್ ಸೂಚಿಸಿದರು.

ಕಾರವಾರ ಬೆಂಗಳೂರು ನಡುವೆ ಹೊಸ ರಾತ್ರಿ ರೈಲು, ರೈಲ್ವೇ ಭದ್ರತಾಪಡೆಯ ಸಶಕ್ತೀಕರಣ ಸೇರಿದಂತೆ ಕರಾವಳಿಯ ವಿವಿದ ರೈಲು ನಿಲ್ದಾಣಗಳ ಅಭಿವೃದ್ದಿಗೆ ಕ್ರಮ ಕೈಗೊಳ್ಳಲು ಸಲಹೆ ನೀಡಿದ ಗಣೇಶ್ ಪುತ್ರನ್ ಅವರಿಗೆ ಕೊಂಕಣ ನಿಗಮವು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ರೈಲಿಗೆ  ನೀರು ತುಂಬುವ  ವ್ಯವಸ್ಥೆಯ ಸೇರಿದಂತೆ ಹಲವು ಕಾರ್ಯಗಳಿಗೆ ಸಂಬಂಧಪಟ್ಟ ಕೆಲಸಗಳನ್ನು ಆರಂಭಿಸುವುದಾಗಿ ಕೊಂಕಣ ನಿಗಮದ ಆಡಳಿತ ನಿರ್ದೇಶಕರು ಭರವಸೆ ನೀಡಿದರು. ಸಭೆಯಲ್ಲಿ ಕಾರವಾರ, ಗೋವಾ, ಮಹಾರಾಷ್ಟ್ರ, ಕೇರಳದ ಸಂಸದರೂ ಸೇರಿದಂತೆ ಹಲವು ಸಲಹಾ ಸಮಿತಿಯ ಸದಸ್ಯರು ಅಧಿಕಾರಿಗಳು ಹಾಜರಿದ್ದರು.


Aware others:

Leave a Reply

Your email address will not be published. Required fields are marked *

error: Content is protected !!