AccidentBlogCrime newsHealthHuman storiesLifestyleLocal newsObituaryTop StoriesTrending

ಕುಂದಾಪುರ: ಮರಣಬಲೆ ಬಿಡುತ್ತಿದ್ದ ಯುವಕ ಸಮುದ್ರದಲ್ಲಿ ಮುಳುಗಿ ಮರಣ

Aware others:

ಕುಂದಾಪುರ: ಕೋಟೇಶ್ವರ ಹಳೆಅಳಿವೆ ಬಳಿ ಸಮುದ್ರದಲ್ಲಿ ಮರಣಬಲೆ ಬಿಡುತ್ತಿದ್ದ ಯುವಕ, ಬೀಜಾಡಿ ನಿವಾಸಿ ಮೇಘರಾಜ್ (24) ಸಮುದ್ರದ ಅಲೆಗೆ ಸಿಲುಕಿ ಮಂಗಳವಾರ ಮರಣಹೊಂದಿದ್ದಾನೆ.

ಮೇಘರಾಜ್ ಅವರು ಬೀಜಾಡಿ ಬಳಿ ಸಮುದ್ರದಲ್ಲಿ ಮರಣಬಲೆ ಬಿಡಲೆಂದು ಹೋಗಿದ್ದರು. ಈ ಸಂದರ್ಭ ಸಮುದ್ರದ ಅಲೆಗೆ ಸಿಲುಕಿ ನೀರುಪಾಲಾಗಿದ್ದರು. ಸಂಜೆ ವೇಳೆ ಮೇಘರಾಜ್ ಮೃತದೇಹವು ಬೀಜಾಡಿ ಸಮೀಪ ಕಡಲ ತೀರದಲ್ಲಿ ಪತ್ತೆಯಾಗಿದೆ. ತಕ್ಷಣ ಸ್ಥಳಕ್ಕಾಗಮಿಸಿದ ಗಂಗೊಳ್ಳಿ ಕರಾವಳಿ ಕಾವಲು ಪಡೆ ಸಿಬ್ಬಂದಿಗಳು ಹಾಗೂ ಕರಾವಳಿ ನಿಯಂತ್ರಣ ದಳದ ಸಿಬ್ಬಂದಿಗಳಾದ ಸುದರ್ಶನ್ ಎಸ್. ಕುಂದರ್, ಕೃಷ್ಣ ಕಾಂಚನ್, ಸಂತೋಷ್ ಪೂಜಾರಿ, ಸುಧಾಕರ್ ಖಾರ್ವಿ ಮೊದಲಾದವರು ಮೇಘರಾಜ್ ಮೃತದೇಹವನ್ನು ಪರಿಶೀಲಿಸಿ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Aware others:

Leave a Reply

Your email address will not be published. Required fields are marked *

error: Content is protected !!