ಚಿಲ್ಲರೆ ತರಿಸಿ ಬೀಯರ್ ಬಾಟಲಿಯಲ್ಲಿ ಇರಿತ : ಗಂಭೀರ
ಕುಂದಾಪುರ: ಬಾರ್& ರೆಸ್ಟೊರೆಂಟ್ ಗೆ ಎಣ್ಣೆ ಹಾಕಲು ಹೋದ ವ್ಯಕ್ತಿಯೊಬ್ಬನಿಗೆ ಬಾರ್ ಎದುರು ಕುಳಿತಿದ್ದವರು 500 ಚಿಲ್ಲರೆ ತರಲು ಹೇಳಿದ್ದು, ಚಿಲ್ಲರೆ ತಂದುಕೊಟ್ಟ ವ್ಯಕ್ತಿಗೆ ಬಿಯರ್ ಬಾಟಲಿಯಲ್ಲಿ ಇರಿದು ಪರಾರಿಯಾದ ಘಟನೆ ಅಂಪಾರು ಗ್ರಾಮದ ನಾಗಶ್ರೀ ಬಾರ್& ರೆಸ್ಟೊರೆಂಟ್ ಗೆ ಬಂದಿದ್ದು, ಬಾರ್ನ ಎದುರು ನಡೆದಿದೆ. ಇಲ್ಲಿನ ನಿವಾಸಿ ಉಮೇಶ್ (40) ಇರಿತಕ್ಕೊಳಗಾಗಿ ಗಂಭೀರ ಗಾಯಗೊಂಡವರು.
ಭಾನುವಾರ ರಾತ್ರಿ 7 ಗಂಟೆ ಸುಮಾರಿಗೆ ಉಮೇಶ್ ಬಾರ್ ಗೆ ಬಂದಿದ್ದಾರೆ. ಇದೇ ಸಂದರ್ಭ , ಬಾರ್ ನ ಎದುರು ಇರುವ ನೆಲ್ಲಿಮರದ ಕಟ್ಟೆಯ ಮೇಲೆ ಆರೋಪಿ ಕೀರ್ತನ್ ಹಾಗೂ ಆತನ ಸ್ನೇಹಿತ ಮಣಿ ಎಂಬವರು ಬಿಯರ್ ಕುಡಿಯುತ್ತಾ ಕುಳಿತುಕೊಂಡಿದ್ದು, ಆಗ ಮಣಿಯು ಫಿರ್ಯಾದಿದಾರರಿಗೆ 500/- ರೂ ನೋಟು ಕೊಟ್ಟು ಚೇಂಜ್ ತರಲು ಹೇಳಿದ್ದಾರೆ. ಉಮೇಶ್ ಚೇಂಜ್ ತಂದು ಮಣಿಗೆ ಕೊಡುವಾಗ ಕೀರ್ತನ್ ಆತನ ಕೈಯಲ್ಲಿದ್ದ ಬಿಯರ್ ಬಾಟಲಿಯನ್ನು ನೆಲ್ಲಿ ಮರದ ಕಟ್ಟೆಗೆ ಹೊಡೆದು ಉಮೇಶನ ಕುತ್ತಿಗೆಗೆ ತಿವಿದು ಆತನ ಬೈಕಿನಲ್ಲಿ ಪರಾರಿಯಾಗಿದ್ದಾನೆ. ಗಾಯಗೊಂಡ ಉಮೇಶ್ ಕುತ್ತಿಗೆಗೆ ಬಟ್ಟೆಯನ್ನು ಒತ್ತಿ ಹಿಡಿದು ಮನೆಗೆ ಬಂದಿದ್ದು, ಬಳಿಕ ಅಜ್ಜರಕಾಡು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.