ಕುಂದಾಪುರ: ನಾರಾಯಣಗುರು ರಸ್ತೆಯ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ 24ನೇ ವರ್ಧಂತ್ಯೋತ್ಸವ

ಕುಂದಾಪುರ: ಇಲ್ಲಿನ ಶ್ರೀ ನಾರಾಯಣಗುರು ರಸ್ತೆಯಲ್ಲಿರುವ ಬ್ರಹ್ಮಶ್ರೀ ನಾರಾಯಣಗುರು ಮಂದಿರದ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ 24ನೇ ವರ್ಧಂತ್ಯೋತ್ಸವ ಮತ್ತು ಅಷ್ಟೋತ್ತರ ಶತನಾರಿಕೇಳ ಗಣಯಾಗ ಕಾರ್ಯಕ್ರಮ ಭಾನುವಾರ ಕೋಟ ಶ್ರೀ ರಾಜರಾಮ ಸೋಮಯಾಜಿಯವರ ಪೌರೋಹಿತ್ಯದಲ್ಲಿ ನಡೆಯಿತು.

ಭಾನುವಾರ ಬೆಳಿಗ್ಗೆ 8.30ರಿಂದ ದೇವತಾ ಪ್ರಾರ್ಥನೆ, ಪುಣ್ಯಾಹ ದ್ರವ್ಯಕಲಶಪೂರಿತ ಪಂಚವಿಂಶತಿ ಕಲಶ ಸ್ಥಾಪನೆ, ಕಲಾಭಿವೃದ್ಧಿ ಹೊಮ, ಅಧಿವಾಸ ಹೋಮ, ಗಣಕೊಡು, ಬ್ರಹ್ಮಕಲಶಾಭಿಷೇಕ, ತೀರ್ಥಪ್ರಸಾದ ವಿತರಣೆ, ಬೆಳಿಗ್ಗೆ 9ರಿಂದ ಅಷ್ಟೋತ್ತರ ಶತನಾರಿಕೇಳ ಗಣಯಾಗ, 12 ಗಂಟೆಗೆ ಮಹಾಪೂಜೆ, ಮಹಾಮಂಗಳಾರತಿ, ಪ್ರಸಾದ ವಿತರಣೆಯ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು.

ಮಧ್ಯಾಹ್ನ 1.30ಕ್ಕೆ “ಬಿಲ್ಲವ ಧಾರ್ಮಿಕ ಸಮಾವೇಶ ಮತ್ತು ಬಿಲ್ಲವ ದತ್ತಾಂಶಗಳ ಗಣತಿಗೆ ಚಾಲನೆ – ಸಮಾಗಮ” ಕಾರ್ಯಕ್ರಮ ನಡೆಯಲಿದೆ. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮಾಜಿ ಶಾಸಕ ಕೆ. ಗೋಪಾಲ್ ಪೂಜಾರಿ ಮೊದಲಾದ ಗಣ್ಯರು ಭಾಗವಹಿಸಲಿದ್ದಾರೆ. ಕುಂದಾಪುರ ತಾಲ್ಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಅಶೋಕ್ ಪೂಜಾರಿ ಬೀಜಾಡಿ, ಅಧ್ಯಕ್ಷತೆ ವಹಿಸಲಿದ್ದಾರೆ. ಸಂಜೆ 7 ಗಂಟೆಗೆ ರಂಗಪೂಜೆ, 7.30ಕ್ಕೆ ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ.