BlogCulturalEntertainmentFashionHighlightsHuman storiesLifestyleLocal newsOthersTop StoriesTrending

ವಕೀಲ ಬನ್ನಾಡಿ ಸೋಮನಾಥ ಹೆಗ್ಡೆಗೆ “ಶ್ರೀ ಚಕ್ರೇಶ್ವರೀ ಸೇವಾರತ್ನ ಪ್ರಶಸ್ತಿ”.

Aware others:

ಕುಂದಾಪುರ: ದೈವ ನರ್ತಕ ಕೀರ್ತಿಶೇಷ ಶ್ರೀ ದೇವಯ್ಯ ಖಾರ್ವಿ, ಗಂಗೊಳ್ಳಿ ಇವರ 51 ನೇ ವರ್ಷದ ಸಂಸ್ಮರಣಾರ್ಥ, ಗಂಗೊಳ್ಳಿ ಮ್ಯಾಂಗನೀಸ್ ರಸ್ತೆ  ಶ್ರೀ ಚಕ್ರೇಶ್ವರೀ ದೇವಸ್ಥಾನದಲ್ಲಿ ನಡೆದ ಋಗ್-ಋಜು ಸಂಹಿತಾ ಯಾಗ, ಶ್ರೀ ಬಾಲ ತ್ರಿಪುರ ಸುಂದರಿ ಲಕ್ಷತ್ರಯಂ ಸ್ವಾಹಾಕಾರ ಯಾಗ ಮತ್ತು ಶ್ರೀ ಲಲಿತೋಪಾಖ್ಯಾನಂ ಪಾರಾಯಣ ಸಪ್ತಾಹ ದಲ್ಲಿ ಬನ್ನಾಡಿ ಯ ಉಪ್ಲಾಡಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ,  ಕುಂದಾಪುರ ವಕೀಲರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಲಯನ್ಸ್ ಪ್ರಾಂತ್ಯಾಧ್ಯಕ್ಷ  ವಕೀಲ ಬನ್ನಾಡಿ ಸೋಮನಾಥ ಹೆಗ್ಡೆ ಯವರಿಗೆ ಶ್ರೀ ದೇವಯ್ಯ ಪ್ರತಿಷ್ಠಾನ (ರಿ), ಬೆಂಗಳೂರು ಹಾಗೂ ಶ್ರೀ ಚಕ್ರೇಶ್ವರೀ ದೇವಸ್ಥಾನ, ಗಂಗೊಳ್ಳಿ ಇವರ ವತಿಯಿಂದ ಕೊಡಮಾಡುವ ಶ್ರೀ ಚಕ್ರೇಶ್ವರೀ ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಸಂದರ್ಭ ಕರ್ನಾಟಕ ರಾಜ್ಯ ಸರಕಾರದ ಮಾನ್ಯ ಮುಜರಾಯಿ & ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಹಿಮಾಲಯದ ಹಿಮವದ್ ಶ್ರೀ ಕೇದಾರನಾಥ ಜ್ಯೋತಿರ್ಲಿಂಗ ದೇವಾಲಯದ ಪ್ರಧಾನ ಅರ್ಚಕ ವಾಗೀಶ್ ಲಿಂಗ ಶಿವಾಚಾರ್ಯ ಹಾಗೂ ಪುತ್ತೂರು ಸಂಪ್ಯದ ಕುಕ್ಕಾಡಿ ತಂತ್ರಿ ಶ್ರೀ ಪ್ರೀತಂ ಪುತ್ತೂರಾಯ, ನ್ಯೂಸ್ ಫಸ್ಟ್  ಟಿ ವಿ ಚಾನಲ್ ನ ಮಾಲಕ ಬೆಂಗಳೂರಿನ ರವಿ ಕುಮಾರ್ ಹಾಗೂ ದೇವಯ್ಯ ಪ್ರತಿಷ್ಠಾನ (ರಿ), ಬೆಂಗಳೂರು ಇದರ ಅಧ್ಯಕ್ಷ ವಿನಾಯಕ್ ಗಂಗೊಳ್ಳಿ, ಗಂಗೊಳ್ಳಿಯ ಶ್ರೀ ಚಕ್ರೇಶ್ವರೀ ದೇವಸ್ಥಾನ ದ ಆಡಳಿತ ಮಂಡಳಿಯ ಅಧ್ಯಕ್ಷ ರಾಮದಾಸ್ ಖಾರ್ವಿ ಮೊದಲಾದವರು ಉಪಸ್ಥಿತರಿದ್ದರು.


Aware others:

Leave a Reply

Your email address will not be published. Required fields are marked *

error: Content is protected !!