ಕುಂದಾಪುರ: ಆರೋಗ್ಯ ಸಮಸ್ಯೆಗೆ ಒತ್ತಡದ ಬದುಕು ಕಾರಣ – ಸುರೇಶ್ ಶೆಟ್ಟಿ ಗೋಪಾಡಿ
ಮೂಡುಗೋಪಾಡಿ ಮಸೀದಿಯಲ್ಲಿ ಉಚಿತ ರಕ್ತ ತಪಾಸಣಾ ಶಿಬಿರ
ಕುಂದಾಪುರ: ಆಧುನಿಕ ಜಗತ್ತಿನ ಭರಾಟೆಯಲ್ಲಿ ನಾವು ಮಾನಸಿಕ ಹಾಗೂ ದೈಹಿಕ ಒತ್ತಡಗಳಿಂದ ಆರೋಗ್ಯವನ್ನು ನಿರ್ಲಕ್ಷ್ಯಿಸುತ್ತಿದ್ದೇವೆ. ಹಿಂದಿನವರು ಹೇಳುತ್ತಿದ್ದ ಆರೋಗ್ಯವೇ ಭಾಗ್ಯ ಎನ್ನುವುದನ್ನು ನಾವು ಮತ್ತೆ ಅರ್ಥ ಮಾಡಿಕೊಂಡು, ಆರೋಗ್ಯದ ಕಡೆಗೆ ಹೆಚ್ಚು ನಿಗಾ ವಹಿಸಬೇಕು. ಆರೋಗ್ಯ ಸರಿಯಾಗಿದ್ದಾಗ ಮನುಷ್ಯ ನೆಮ್ಮದಿಯ ಬದುಕು ಸಾಗಿಸಲು ಸಾಧ್ಯ ಎಂದು ಗೋಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುರೇಶ್ ಶೆಟ್ಟಿ ಗೋಪಾಡಿ ಹೇಳಿದರು. ಮಂಗಳವಾರ ಕುಂದಾಪುರ ತಾಲೂಕಿನ ಮೂಡುಗೋಪಾಡಿಯ ರಿಫಾಯಿ ಜುಮ್ಮಾ ಮಸೀದಿಯ ಆವರಣದಲ್ಲಿ ನಮ್ಮ ನಾಡು ಒಕ್ಕೂಟ ಕಮ್ಯೂನಿಟಿ ಸೆಂಟರ್ ಆಶ್ರಯದಲ್ಲಿ ನಡೆದ ಉಚಿತ ರಕ್ತ ಪರೀಕ್ಷೆ ಶಿಬಿರದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.



ಕಲ್ಪವೃಕ್ಷ ಗಿಡಕ್ಕೆ ನೀರೆರೆದು ಕಾರ್ಯಕ್ರಮವನ್ನು ಉದ್ಘಾಟಿಸಿದ ನಮ್ಮ ನಾಡು ಒಕ್ಕೂಟ ಕಮ್ಯೂನಿಟಿ ಸೆಂಟರ್ನ ಕೇಂದ್ರ ಸಮಿತಿಯ ಪ್ರದಾನ ಕಾರ್ಯದರ್ಶಿ ಮೌ ಝಮಿರ್ ಅಹ್ಮದ್ ರಷಾದಿ ಮಾತನಾಡಿ, ಸಂಸ್ಥೆಯ ಕಾರ್ಯವೈಕರಿಗಳನ್ನು ವಿವರಿಸಿದರು. ರಿಫಾಯಿ ಜುಮ್ಮಾ ಮಸ್ಜಿದ್ ನ ಖತೀಬರಾದ ಇಕ್ರಮುಲ್ಲಾ ಮಾತನಾಡಿ, ಸೌಹಾರ್ದಯುತ ಸಮಾಜಕ್ಕೆ ಎಲ್ಲಾ ಸಮಾಜದ ಬಾಂಧವರು ಜೊತೆಯಾಗಿ ಕೈಜೋಡಿಸಿದಾಗ ಶಾಂತಿ ಹಾಗೂ ಸಹಬಾಳ್ವೆ ಸಾಧ್ಯ ಎಂದರು. ನಮ್ಮ ನಾಡು ಒಕ್ಕೂಟ ಕಮ್ಯೂನಿಟಿ ಸೆಂಟರ್ ಕುಂದಾಪುರ ಇದರ ಪ್ರದಾನ ಕಾರ್ಯದರ್ಶಿ ಹುಸೇನ್ ಹೈಕಾಡಿ ಸಂಸ್ಥೆಯ ಸಾಧನೆಗಳನ್ನು ವಿವರಿಸಿದರು.



ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ನ ಉಪಾಧ್ಯಕ್ಷೆ ಶಾಂತಾ, ಸದಸ್ಯೆ ಸಾವಿತ್ರಿ, ಮಸೀದಿಯ ಉಪಾಧ್ಯಕ್ಷ ಮೊಹಿದಿನ್, ಸದಸ್ಯರಾದ ಅಬ್ದುಲ್ ಖಾದರ್ ಮೂಡ್ ಗೋಪಾಡಿ, ನಾಸಿರ್ ಮೂಡ್ ಗೋಪಾಡಿ, ಅಲ್ತಾಫ್ ಮೂಡ್ ಗೋಪಾಡಿ, ಹ್ಯಾರಿಸ್ ಮೂಡ್ ಗೋಪಾಡಿ, ಹುಸೇನ್ ಮೂಡ್ ಗೋಪಾಡಿ, ಬಯೋಲೈನ್ ಲೈಫ್ ಕೇರ್ ಇದರ ಆಡಳಿತ ನಿರ್ದೇಶಕ ಸೋಮನಾಥ್ ಇನ್ನಿತರರು ಉಪಸ್ಥಿತರಿದ್ದರು. ಕಿಡ್ನಿ, ಬಿ ಪಿ, ಶುಗರ್, ಕ್ಯಾಲ್ಸಿಯಂ, ಯೂರಿಕ್ ಆಸೀಡ್, ಕಂಪ್ಲೇಟ್ ಬ್ಲಡ್ ಕೌಂಟ್, ಸಕ್ಕರೆ ಖಾಯಿಲೆ, ಲಿವರ್, ಥೈರಾಯಿಡ್ ಕಾರ್ಯ ಪರೀಕ್ಷೆ, ಕೊಲೆಸ್ಟ್ರಾಲ್, ಕಬ್ಬಿಣದ ಪ್ರೊಫೈಲ್ ಇನ್ನಿತರ ರಕ್ತ ಪರೀಕ್ಷೆ ನಡೆಸಲಾಯಿತು. ಸುಮಾರು 75ಕ್ಕೂ ಅಧಿಕ ಫಲಾನುಭವಿಗಳು ಉಚಿತ ರಕ್ತ ಪರೀಕ್ಷೆ ಮಾಡಿಸಿಕೊಂಡರು.