BlogGovernmentHealthHighlightsHuman storiesLifestyleLocal newsOthersPoliticsState newsTop StoriesTrending

ಉಡುಪಿ: ಉಡುಪಿ ಜಿಲ್ಲೆಯ 8 ವಕ್ಫ್ ಸಂಸ್ಥೆಗಳಿಗೆ ಡೆಡ್ ಬಾಡಿ ಫ್ರೀಜರ್ ಹಸ್ತಾಂತರಿಸಿದ ಅಬ್ದುಲ್ ಮುತಾಲಿ ವಂಡ್ಸೆ

Aware others:

ಕುಂದಾಪುರ: ರಾಜ್ಯ ಸರ್ಕಾರದ ವಕ್ಫ್ ಮಂಡಳಿ ಬೆಂಗಳೂರು ವತಿಯಿಂದ ನೀಡಲಾಗುವ ಮೃತ ದೇಹಗಳ ಇಡುವ ಫ್ರೀಜರ್ ಬಾಕ್ಸ್ ಗಳನ್ನು ಜಿಲ್ಲೆಯ ಎಂಟು 8 ವಕ್ಫ್  ಸಂಸ್ಥೆಗಳಿಗೆ ಉಡುಪಿ ಜಿಲ್ಲಾ ಸಲಹಾ ಸಮಿತಿ ಅಧ್ಯಕ್ಷ ಸಿ.ಎಚ್.ಅಬ್ದುಲ್ ಮುತಾಲಿ ವಂಡ್ಸೆ ಮಣಿಪಾಲದ ಕಛೇರಿಯಲ್ಲಿ ಹಸ್ತಾಂತರಿಸಿದರು.

ಈ ಸಂದರ್ಭ ಮಾತನಾಡಿದ ಸಿ.ಎಚ್.ಅಬ್ದುಲ್ ಮುತಾಲಿ, ವಕ್ಫ್ ಮಂಡಳಿ ಕೊಡಮಾಡಿದ ಫ್ರೀಜರ್ ಬಾಕ್ಸ್ ಗಳಿಗೆ ಯಾವುದೇ ಬಾಡಿಗೆ ಇರುವುದಿಲ್ಲ. ಆಸುಪಾಸಿನ ಜಮಾತಿನ ಬಾಂಧವರು ಇದರ ಉಪಯೋಗವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು. ವಕ್ಫ್ ಸಚಿವ ಜಮೀರ್ ಅಹಮದ್ ರವರಿಗೆ,  ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಅನ್ವರ್ ಪಾಷರವರಿಗೆ, ವಕ್ಫ್ ಬೋರ್ಡ್ ನಿಕಟಪೂರ್ವ ಅಧ್ಯಕ್ಷ ಎನ್.ಕೆ.ಎಂ ಶಾಫಿ ಸಅದಿ ಹಾಗೂ ರಾಜ್ಯ ವಕ್ಫ್  ಬೋರ್ಡ್ ನ ಸದಸ್ಯ ಯಾಕೂಬ್ ಗುಲ್ವಾಡಿ ರವರಿಗೆ ಅಭಿನಂದನೆ ಸಲ್ಲಿಸಲಾಯಿತು.

ಉಡುಪಿ ಜಾಮಿಯಾ ಮಸೀದಿ, ಕುಂದಾಪುರ ಜಾಮಿಯಾ ಮಸೀದಿ, ಕಾರ್ಕಳದ ಮುಸ್ಲಿಂ ಜಮಾತ್ ಜುಮಾ ಮಸೀದಿ ಸಾಲ್ಮರ್, ಕೋಟ  ಜಾಮಿಯಾ ಮಸೀದಿ, ಕಟಪಾಡಿಯ ಕೋಟೆ ಜಾಮಿಯಾ ಮಸೀದಿ, ಮಲ್ಪೆ  ಸೈಯದಿನ ಅಬೂಬಕ್ಕರ್ ಸಿದ್ದಿಕ್ ಮಸೀದಿ, ಮಾವಂತೆ ನಾವುಂದದ ಮುಹಿಯದ್ದೀನ್ ಜುಮ್ಮಾ ಮಸೀದಿ ಮರವಂತೆ ಹಾಗೂ ಬೈಂದೂರು ಜಾಮಿಯಾ ಮಸೀದಿಗಳಿಗೆ ಫ್ರೀಜರ್ ಬಾಕ್ಸ್ಗಳನ್ನು ವಿತರಿಸಲಾಯಿತು.


Aware others:

Leave a Reply

Your email address will not be published. Required fields are marked *

error: Content is protected !!