BlogAccidentCrime newsGovernmentHealthHighlightsHuman storiesLifestyleLocal newsObituaryOthersState newsSuccess storiesTop StoriesTrending

ಕುಂದಾಪುರ: ಕೋಡಿ ಬೀಚಿನಲ್ಲಿ ಈಜಲು ಬಂದ ಮೂವರು ಸಹೋದರರು ನೀರು ಪಾಲು: ಮತ್ತೊಬ್ಬನ ಮೃತ ದೇಹ ಪತ್ತೆ

Aware others:

ಕುಂದಾಪುರ: ಶನಿವಾರ ಸಂಜೆ ಇಲ್ಲಿಗೆ ಸಮೀಪದ ಕೋಡಿ ಬೀಚಿನಲ್ಲಿ ಈಜಾಡಲು ಹೋಗಿ ಸಮುದ್ರದಲ್ಲಿ ನಾಪತ್ತೆಯಾಗಿದ್ದ ಯುವಕನ ಮೃತದೇಹ ಪತ್ತೆಯಾಗಿದೆ.

ಅಂಪಾರು ಐದು ಸೆಂಟ್ಸ್ ನಿವಾಸಿ ದಾಮೋದರ್ ಪ್ರಭು ಎಂಬುವರ ಸಹೋದರನ ಪುತ್ರ ದರ್ಶನ್ (18) ಸಮುದ್ರಡಲ್ಲಿ ನಾಪತ್ತೆಯಾಗಿದ್ದ. ಅಗ್ನಿಶಾಮಕ ಸಿಬ್ಬಂದಿಗಳು ಹಾಗು ಮುಳುಗು ತಜ್ಞರು ಕಾರ್ಯಾಚರಣೆ ನಡೆಸಿ ಮೃತದೇಹ ಪತ್ತೆಹಚ್ಚಿದ್ದಾರೆ.

ದಾಮೋದರ್ ಪ್ರಭು ಅವರ ಇಬ್ಬರು ಮಕ್ಕಳ ಪೈಕಿ ಧನರಾಜ್ (23) ಸಾವನ್ನಪ್ಪಿದ್ದು ಅವರ ಮೃತದೇಹ ಮೊದಲು ಪತ್ತೆಯಾಗಿತ್ತು. ಇನ್ನೊಬ್ಬ ಮಗ ಧನುಷ್ (20) ಗಂಭೀರ ಸ್ಥಿತಿಯಲ್ಲಿ ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.


Aware others:

Leave a Reply

Your email address will not be published. Required fields are marked *

error: Content is protected !!