BlogCrime newsEducationGovernmentHighlightsHuman storiesLifestyleLocal newsNational NewsOthersPoliticsProtestState newsTop StoriesTrending

ಕುಂದಾಪುರ: ಕಾಳವರ ಷಷ್ಟಿಯಲ್ಲಿ ಪಂಕ್ತಿಬೇಧ ನಡೆಸದಂತೆ ಗ್ರಾಮ ಪಂಚಾಯಿತಿ ಪತ್ರ!

Aware others:

ಕುಂದಾಪುರ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯುವ ಷಷ್ಠಿಯಂದೇ ಷಷ್ಠಿ ನಡೆಯುವ ಸ್ಥಳ ಎಂದರೆ ಅದು ಕುಂದಾಪುರ ತಾಲ್ಲೂಕಿನ ಕಾಳಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಳಿಂಗ ದೇವಸ್ಥಾನ. 

ಕಾಳಾವರ ಕಾಳಿಂಗ ದೇವಸ್ಥಾನದಲ್ಲಿ ಪ್ರತಿ ವರ್ಷವೂ ಷಷ್ಠಿ ಹಬ್ಬ ವಿಜೃಂಭಣೆಯಿಂದ ನಡೆಯುತ್ತದೆ. ಆದರೆ ಇಲ್ಲಿ ಪಂಕ್ತಿ ಭೇಧ ನಡೆಯುತ್ತಿರುವುದಾಗಿ ಗ್ರಾಮ ಪಂಚಾಯತ್ ಗೆ ದೂರು ಬಂದ ಹಿನ್ನೆಲೆಯಲ್ಲಿ ದೇವಸ್ಥಾನದ ಆಡಳಿತ ಸಮಿತಿಗೆ ಕಾಳಾವರ ಗ್ರಾಮ ಪಂಚಾಯತ್ ನೋಟೀಸು ನೀಡಿದೆ.

ಕಾಳಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಳಿಂಗ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಹಿಂದಿನ ವರ್ಷದ ಜಾತ್ರೆಯಲ್ಲಿ ಸಾರ್ವಜನಿಕರಿಂದ ಮೌಖಿಕವಾಗಿ ಪಂಕ್ತಿ ಬೇದ ಮಾಡುತ್ತಿರುವ ಕುರಿತು ದೂರು ಬಂದಿದ್ದು, ಸದ್ರಿ ದೇವಸ್ಥಾನವು ಸರ್ಕಾರದ ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುವುದರಿಂದ ಸಾರ್ವಜನಿಕರಿಂದ ಮುಂದಿನ ವಾರ್ಷಿಕ ಷಷ್ಠಿ ಮಹೋತ್ಸವದಲ್ಲಿ ಪಂಕ್ತಿ ಭೇದದ ದೂರುಗಳು ಬಾರದಂತೆ ದೇವಸ್ಥಾನದ ಆಡಳಿತ ಮುಕೇಶ್ವರರು ನೋಡಿಕೊಳ್ಳಬೇಕಾಗಿ ಈ ಮೂಲಕ ತಮಗೆ ಮಾಹಿತಿಯನ್ನು ತಿಳಿಸಿದೆ ಎಂದು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ತನ್ನ ಪತ್ರದಲ್ಲಿ ತಿಳಿಸಿದ್ದಾರೆ.

ಆದರೆ ದೇವಸ್ಥಾನ ಆಡಳಿತ ಮಂಡಳಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಪತ್ರಕ್ಕೆ ಹೇಗೆ ಸ್ಪಂದಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.


Aware others:

Leave a Reply

Your email address will not be published. Required fields are marked *

error: Content is protected !!